ರಾಜ್ಯ

ಸರಾಯಿ ವಿರುದ್ದ ಸಮರ ಸಾರಿದ ಕಲಘಟಗಿಯ ಬಿಜೆಪಿ ಶಾಸಕ

ಧಾರವಾಡ prajakiran.com : ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗ್ರಾಮಗಳಲ್ಲಿ ಸರಾಯಿ ಎಗ್ಗಿಲ್ಲದೆ ಮಾರುತ್ತಿದ್ದು, ಇದರ ಬಗ್ಗೆ ಕಲಘಟಗಿ ಶಾಸಕ ಸಿ ಎಂ ನಿಂಬಣ್ಣವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಕಲಘಟಗಿಯಲ್ಲಿ ತಮ್ಮ ಸಾರ್ವಜನಿಕರ ಕಚೇರಿಯಲ್ಲಿ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದರು.

ಕಲಘಟಗಿ ಪಟ್ಟಣದಲ್ಲಿರುವ ಸರಕಾರಿ ಒಡೆತನದ ಹಾಗೂ ಖಾಸಗಿ ಒಡೆತನದ ಮದ್ಯದ ಅಂಗಡಿಗಳು ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಅಕ್ರಮ ಮದ್ಯಮಾರಾಟ ಮಾಡುತ್ತಿದ್ದು, ಕೂಡಲೇ ನಿಲ್ಲಿಸಬೇಕೆಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.

ಅದೇ ರೕಿತಿ ಸಂಭಂದಿಸಿದ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಕೂಡ ಇದರ ಬಗ್ಗೆ ಗಮನ ಹರಿಸಿಬೇಕಾಗಿದ್ದು, ಇದರಿಂದ ಪ್ರತಿಗ್ರಾಮಗಳಲ್ಲಿ ಚಹಾ ಅಂಗಡಿ ಹೆಸರಿನಲ್ಲಿ ಎಗ್ಗಿಲ್ಲದೆ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಗ್ರಾಮಿಣ ಜನರಿಗೆ ತುಂಬಾ ತೊಂದರೆಯುಂಟು ಮಾಡಿದೆ ಎಂದು ಆರೋಪಿಸಿದರು.

ಈಗಾಗಲೇ ನನ್ನ ಕ್ಷೇತ್ರಕ್ಕೆ ಯಾವುದೇ ರೀತಿಯಾದ ಹೊಸ ಮದ್ಯದ ಅಂಗಡಿಗೆ ಅವಕಾಶ ಕೊಡಬಾರದೆಂದು ನಾನು ಸರಕಾರಕ್ಕೆ ಕೇಳಿಕೊಂಡಿದ್ದೆನೆ ಎಂದು ಹೇಳಿದರು.

ನನ್ನ ಕ್ಷೇತ್ರವನ್ನು ಮದ್ಯ ಮುಕ್ತ ಕ್ಷೇತ್ರ ಮಾಡಬೇಕೆನ್ನುವ ಆಸೆ ಇದ್ದು, ಕೂಡಲೇ ಎಲ್ಲಾ ಮದ್ಯದ ಅಂಗಡಿಯವರು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಬೇಕೆಂದು ಎಚ್ಚರಿಕೆ ನೀಡಿದರು.

ಈಗಾಗಲೇ ಸಂಘ ಸಂಸ್ಥೆಗಳು ಮದ್ಯ ನಿಷೇಧಕ್ಕೆ ಹೋರಾಟ ಮಾಡುತ್ತಿದ್ದು, ನಾನು ಕೂಡ ಅವರ ಜೊತೆ ನಿಲ್ಲುತ್ತೇನೆ.

ಬರುವ ಸಂಕ್ರಮಣದ ಒಳಗಾಗಿ ಎಲ್ಲ ಅಕ್ರಮ ಮದ್ಯಮಾರಾಟ ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನಮಾನದಲ್ಲಿ ಹೆಚ್ಚಿನ ರೀತಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದರು. ಇದಕ್ಕೆ ಕ್ಷೇತ್ರದ ಜನರು ಕೂಡ ನಮ್ಮ ಜೊತೆ ಕೈ ಜೋಡಿಸಬೇಕು ಎಂದು ತಿಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *