21 ವರ್ಷಗಳ ಕಾಲ ಬಿಜೆಪಿಗೆ ದುಡಿದ ಕಾರ್ಯಕರ್ತನ ಮನದಾಳದ ಮಾತು
ಹಲವು ಘಟನೆ ನೆನೆದು ಕಣ್ಣೀರಿಟ್ಟ ನಡಟ್ಟಿ
ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಮತದಾನಕ್ಕೆ ಕೇವಲ ಎರಡು ದಿನ ಬಾಕಿ ಇರುವ ಬೆನ್ನಲ್ಲೇ ವಾರ್ಡ ನಂ 3ರ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದ (ಪಕ್ಷೇತರ ಅಭ್ಯರ್ಥಿ) ಮಂಜುನಾಥ ನಡಟ್ಟಿ ಹಲವು ಘಟನೆ ನೆನೆದು ಕಣ್ಣೀರಿಟ್ಟ ವೀಡಿಯೋ ವೈರಲ್ ಆಗಿದೆ.
21 ವರ್ಷಗಳ ಕಾಲ ಬಿಜೆಪಿಗೆ ದುಡಿದ ಬಗ್ಗೆ ಹಾಗೂ ಹತ್ತು ಹಲವು ಕಹಿ ಘಟನೆ ನೆನೆದು ಮನದಾಳದ ಮಾತುಗಳನ್ನು ಹೊರ ಹಾಕಿದ್ದಾರೆ.
ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿದ್ದರಿಂದ
ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ ಅವರು ಮಂಜುನಾಥ ನಡಟ್ಟಿಯನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.
ಇದರಿಂದಾಗಿ ಬಿಜೆಪಿ ಪಕ್ಷದ ಮೇಲೆ ಅತೀ ಗೌರವ ಇಟ್ಟುಕೊಂಡಿದ್ದ ಮಂಜುನಾಥ ನಡಟ್ಟಿ ಹಲವು ವರ್ಷಗಳ ಕಾಲ ತಮ್ಮ ಮನೆ ಮೇಲಿದ್ದ ಪಕ್ಚದ ಧ್ವಜವನ್ನು ಕೆಳಗಿ ಇಳಿಸಿದ್ದಾರೆ.
21 ವರ್ಷ ಪಕ್ಷದಲ್ಲಿ ದುಡಿದರೂ ಟಿಕೇಟ್ ನೀಡದೆ ಕಡೆಗಣಿಸಿದ್ದರಿಂದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೆನೆ.
ಇದರಲ್ಲಿ ತಪ್ಪೇನಿದೆ. ಪಕ್ಷ ನಿಷ್ಟರಿಗೆ ಇಲ್ಲಿ ಗೌರವವಿಲ್ಲವೇ ಎಂದು ಹೇಳಿದರು.