ಧಾರವಾಡ prajakiran.com : ಧಾರವಾಡ ಗ್ರಾಮೀಣ ಕಾಂಗ್ರೆಸ್ ಪಕ್ಷದ ಮುಖಂಡ ಅಣ್ಣಪ್ಪ ಗೌಡ ಬರ್ತ್ ಡೇ ಪಾರ್ಟಿಯಲ್ಲಿ ಗುಂಡು ಹಾರಿಸಿದ ಮಲ್ಲಿಕಾರ್ಜುನ ಆಯಟ್ಟಿ ಪೊಲೀಸರ ಅತಿಥಿಯಾಗಿದ್ದಾನೆ.
ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ತಾಲೂಕು ಪಂಚಾಯ್ತಿಯ ಮಾಜಿ ಸದಸ್ಯ ಅಣ್ಣಪ್ಪಗೌಡರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮಲ್ಲಿಕಾರ್ಜುನ ಆಯಟ್ಟಿ ರಿವಾಲ್ವಾರ್ ತೆಗೆದು ಗಾಳಿಯಲ್ಲಿ ಒಂದು ಸುತ್ತು ಫೈರಿಂಗ್ ಮಾಡಿದಲ್ಲದೆ, ರಿವಾಲ್ವಾರ್ ಪಾಯಿಂಟ್ ಇಟ್ಟು ವಿಷ್ ಮಾಡಿರುವುದು ಯಡವಟ್ಟಿಗೆ ಕಾರಣವಾಗಿದೆ.
ಇದರಿಂದಾಗಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಆಯಟ್ಟಿ ಗನ್ ಲೈಸೆನ್ ರದ್ದುಗೊಳಿಸಲು ಧಾರವಾಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ ತಿಳಿಸಿದ್ದಾರೆ.
ಇಬ್ಬರನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಎಸ್ಪಿ ಕೃಷ್ಣಕಾಂತ ವಿವರಿಸಿದರು.
ಅಚ್ಚರಿ ಹಾಗೂ ದುರಂತದ ಸಂಗತಿಯೆಂದರೆ ಅನೇಕರು ಬರ್ತ್ ಡೇ ವಿಶ್ ಮಾಡಲು ಗಾಳಿಯಲ್ಲಿ ಫೈರ್ ಮಾಡಿದ್ದ ವೀಡಿಯೋವನ್ನು ಅನೇಕರು ತಮ್ಮ ಫೇಸ್ ಬುಕ್ ಪ್ರೊಫೈಲ್ ಇಟ್ಟುಕೊಂಡು ಬಿಲ್ಡಪ್ ಕೊಟ್ಟು ವಿವಾದವನ್ನು ತಾವೇ ಮೈ ಮೇಲೆ ಎಳೆದುಕೊಂಡಿದ್ದರು.
ಅಣ್ಣಪ್ಪಗೌಡ ಮತ್ತು ಮಲ್ಲಿಕಾರ್ಜುನನ ಬೆಂಬಲಿಗರು ಇದನ್ನು ಪ್ರತಿಷ್ಠೆ ಎಂಬಂತೆ ತಮ್ಮ ವಾಟ್ಸಾಪ್ಗಳಲ್ಲಿ ಸ್ಟೇಟಸ್ ಸಹ ಇಟ್ಟುಕೊಂಡಿದ್ದರು. ವಿಡಿಯೋ ಸಕತ್ ವೈರಲ್ ಆಗಿ, ಫೈರಿಂಗ್ ಸುದ್ದಿ ಮಾಧ್ಯಮಗಳಲ್ಲಿ ಬಂತೋ ಆಗ ಪೊಲೀಸರು ಸಹ ಜಾಗೃತಗೊಂಡು ಕೇಸ್ ಜಡಿದು ಬಿಸಿ ತಾಕಿಸಿದ್ದಾರೆ.
ಇನ್ನು ತಾನು ಪಾರ್ಟಿ ಮಾಡಿಕೊಳ್ಳುವಾಗ ಯಾರೋ ಬಂದು ಇಂಥದ್ದೊಂದು ಕೆಲಸ ಮಾಡಿದ್ದಾರೆ ಎಂದು ಅಣ್ಣಪ್ಪಗೌಡ ನುಣುಚಿಕೊಂಡಿದ್ದಾರೆ.
ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಇವರ ಮೇಲೆ ಶಸಾಸ್ತ್ರ ಕಾಯಿದೆಯಡಿ ಕೇಸ್ ದಾಖಲಿಸಿಕೊಂಡಿದ್ದು, ಮಲ್ಲಿಕಾರ್ಜುನ ಆಯಟ್ಟಿ ರಿವಾಲ್ವಾರ್ ಸಹ ಜಪ್ತಿ ಮಾಡಿಕೊಂಡಿದ್ದಾರೆ.
ಆತನ ಗನ್ ಲೈಸೆನ್ಸ್ ರದ್ದು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಕೂಡ ಬರೆದಿದ್ದಾರೆ.
ಒಟ್ಟಾರೆಯಾಗಿ ರಾಜಕೀಯ ನಾಯಕರು ಬರ್ತ್ಡೇ ಜೋಶ್ನಲ್ಲಿ ಮಾಡಿದ ಎಡವಟ್ಟೊಂದು ಇಬ್ಬರನ್ನು ಪೊಲೀಸ್ ಠಾಣೆ ಸೇರುವಂತೆ ಮಾಡಿರುವುದು ಸುಳ್ಳಲ್ಲ.