ರಾಜ್ಯ

ಶ್ರೀ ಕರೋನಮ್ಮದೇವಿಗೆ ಉಡಿತುಂಬಿ ಕಳುಹಿಸಿಕೊಟ್ಟ  ಗ್ರಾಮಸ್ಥರು….!

ಬಳ್ಳಾರಿ prajakiran.com : ಲೋಕಕಲ್ಯಾಣಕ್ಕಾಗಿಅದರಲ್ಲೂ ವಿಶೇಷವಾಗಿ ಶ್ರೀ ಕರೋನಮ್ಮದೇವಿಗೆ ಉಡಿತುಂಬಿ ಕಳುಹಿಸಿಕೊಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.  

 ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಎಂ.ಬಿ.ಅಯ್ಯನಹಳ್ಳಿಯಲ್ಲಿಂದು ಇಡೀ ಗ್ರಾಮದ ಜನತೆ  ಶ್ರೀಕರೋನಮ್ಮಳನ್ನು ವಿಧಿವತ್ತಾಗಿ ಪೂಜಿಸಿ ಉಡಿತುಂಬಿ,ತಮ್ಮ ಗ್ರಾಮದ ಹೊರವಲಯಕ್ಕೆ ತೆರಳಿ ಬಿಳ್ಕೊಡುವ ಮೂಲಕ ಸುದ್ದಿಯಾಗಿದ್ದಾರೆ.

ಗ್ರಾಮದ ಪ್ರತಿಯೊಂದು ಮನೆಯಲ್ಲಿಅದರಲ್ಲೂ ಪ್ರತಿಯೊಂದು ಕೋಮಿನ ಜನರು ಮನೆಯಂಗಳವನ್ನು ಸಗಣಿಯಿಂದ ಸಾರಿ ರಂಗೋಲಿ ಹಾಕಿ,ಸಿಹಿ ಖಾದ್ಯಗಳನ್ನು ತಯಾರಿಸಿ  ತಮ್ಮ ಮನೆಯಲ್ಲಿನ ಹಸುವಿನ ಸಗಣಿಯಿಂದ ಶ್ರೀಕರೋನಮ್ಮ ದೇವಿಯನ್ನು ತಯಾರಿಸಿ,ವಿಧಿವತ್ತಾಗಿ ಆರಾಧಿಸಿ ಸಿಹಿ ಖಾದ್ಯಗಳನ್ನು ಶ್ರೀಕರೊನಮ್ಮಳಿಗೆ ಉಡಿತುಂಬಿ, ನೈವ್ಯೇಧ್ಯಗೈದು ಪ್ರಾರ್ಥಿಸಿದ್ದಾರೆ.



ತಮ್ಮ ಮನೆಯಂಗಳದಿಂದ ಅಷ್ಟೇ ಅಲ್ಲ,ಗ್ರಾಮದಿಂದ,ನಾಡಿನಿಂದ,ರಾಷ್ಟ್ರಗಳಿಂದ ಮಾತ್ರವಲ್ಲ ಲೋಕದಿಂದ ಹೊರಟು ಹೋಗು ತಾಯಿ ಎಂದು ಸವ೯ರೂ ಬೇಡಿಕೊಂಡಿದ್ದಾರೆ.

ತದನಂತರ ಎಲ್ಲಾಭಕ್ತರು ಮನೆಗೊಬ್ಬರಂತೆ ಶ್ರೀಕೊರೋನಮ್ಮಳನ್ನು, ವಿಧಿವತ್ತಾಗಿ ತಮ್ಮ ತಮ್ಮ ಕೈಯಲ್ಲಿ ಹಿಡಿದುಕೊಂಡು,ಶ್ರೀ ಕರೋನಮ್ಮಳಿಗೆ ಉಡಿತುಂಬಿ ಸಾಮೂಹಿಕವಾಗಿ,ಗ್ರಾಮದಿಂದ ಒಂದು ಕಿಮೀ ಅಂತರದಲ್ಲಿರುವ ಬೃಹತ್ ಬೇವಿನ ಮರದೆಡೆಗೆ ತೆರಳಿ ಮರದ ಬುಡದಲ್ಲಿ ಸ್ಥಾಪಿಸಿ ಹಿಂದಿರುಗಿರುವಂತೆ ಪೂಜೆ ಸಲ್ಲಿಸಿದರು.

ಇದರಿಂದಾಗಿ ಕರೋನಾ ಮಹಾಮಾರಿ ತಮ್ಮ ಗ್ರಾಮದಿಂದ ಮುಕ್ತವಾಯಿತೆಂದು    ಎಂ.ಬಿ.ಅಯ್ಯನಹಳ್ಳಿಯ ಗ್ರಾಮಸ್ಥರು ನಂಬಿಕೆ ಹೊಂದಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *