ರಾಜ್ಯ

ಸಿಎಂ ಯಡಿಯೂರಪ್ಪ ವಿರುದ್ದ ದೂರು ಸಲ್ಲಿಸಿದ ಧಾರವಾಡದ ಬಿಜೆಪಿ ಶಾಸಕ ಬೆಲ್ಲದ….!

ಅರುಣ್ ಸಿಂಗ್ ಭೇಟಿ ಮಾಡಿ ಚರ್ಚೆ

ನವದೆಹಲಿ prajakiran.com : ರಾಜ್ಯದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಸೋಮವಾರ ನವದೆಹಲಿಯಲ್ಲಿ ಧಾರವಾಡ ಜಿಲ್ಲೆಯ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಭೇಟಿ ಮಾಡಿದ್ದಾರೆ.

ಇಪ್ಪತ್ತು ನಿಮಿಷಗಳ ಕಾಲ ಅವರೊಂದಿಗೆ ಚರ್ಚೆ ಮಾಡಿದ್ದು, ನಾಯಕತ್ವ ಬದಲಾವಣೆ ಕುರಿತು ಸಮಾಲೋಚನೆ ನಡೆಸಿದ್ದಾರೆ.

ಅಲ್ಲದೆ, ಸಿಎಂ ಯಡಿಯೂರಪ್ಪ ವಿರುದ್ಧ ದೂರು ಸಲ್ಲಿಸಿದ್ದು, ನಾಯಕತಗಬ ಬದಲಾವಣೆ ಕುರಿತು ಗಮನ ಸೆಳೆದರು.

ಅಸಮಾಧಾನ ಶಾಸಕರ ಪಟ್ಟಿ ಸಲ್ಲಿಸಿದ್ದು, ಬೆಂಗಳೂರು ಭೇಟಿ ವೇಳೆ ಶಾಸಕರ ಅಹವಾಲು ಆಲಿಸುವುದಾಗಿ ಅರುಣ ಸಿಂಗದ ಭರವಸೆ ನೀಡಿದ್ದಾರೆ.

ಶಾಸಕ ಬೆಲ್ಲದ ಇದು ತಮ್ಮಖಾಸಗಿ ಭೇಟಿ ಎಂದು ಹೇಳಿ ಈಗ ಹೈಕಮಾಂಡ್ ಭೇಟಿ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ.

ಈ ಅಸಮಾಧಾನಗೊಂಡ ಶಾಸಕರಲ್ಲಿ ಕೊಡಗು ಜಿಲ್ಲೆಯ ಇಬ್ಬರು, ಬಾಗಲಕೋಟೆ ಜಿಲ್ಲೆಯ ಇಬ್ಬರು ಶಾಸಕರು, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಚಿತ್ರದುರ್ಗ, ಜಿಲ್ಲೆಯ ಶಾಸಕರು ಇದ್ದಾರೆ ಎಂದು ತಿಳಿದುಬಂದಿದೆ.

ಜೂನ್ 18 ರಂದು ಶಾಸಕಾಂಗ ಸಭೆಯ ಮುನ್ನವೇ  ಶಾಸಕರು ಭೇಟಿಯಾಗಲು ನಿರ್ಧರಿಸಿದ್ದಾರೆ.

ಇದೇ ವೇಳೆ ಹಲವು ಶಾಸಕರು ಯಡಿಯೂರಪ್ಪ ಪರ ಭೇಟಿಗೆ ಮುಂದಾಗಿದ್ದಾರೆ. ಅವರ ನಾಯಕತ್ವ ಪ್ರಶ್ನೆ ಮಾಡುವಂತಿಲ್ಲ ಎಂದು ಹೇಳಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *