ಧಾರವಾಡ prajakiran.com: ಮಾಜಿ ಸಚಿವ ರಮೇಶ ಜಾರಕಿಹೊಳಿಯನ್ನ 24 ಗಂಟೆಗಳಲ್ಲಿ ಬಂಧಿಸದಿದ್ದರೆ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಕಾಂಗ್ರೆಸ್ ವಕ್ತಾರ ರಾಬರ್ಟ್ ದದ್ದಾಪುರಿ ತಿಳಿಸಿದರು.
ಅವರು ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೋಷಕರು ಆರೋಪಿ ರಮೇಶ ಜಾರಕಿಹೊಳಿಯವರ ಒತ್ತಡಕ್ಕೆ ಸಿಲುಕಿದ್ದಾರೆ. ಹೀಗಾಗಿ ಅವರ ಕೌನ್ಸಲಿಂಗ್ ಆಗಬೇಕು. ಯುವತಿಗೆ ಹಾಗೂ ಅವರ ಪೋಷಕರಿಗೆ ಜೀವಬೆದರಿಕೆ
ಇದೆ. ತಕ್ಷಣ ರಮೇಶ ಬಂಧಿಸಬೇಕು.
ಮುಖ್ಯಮಂತ್ರಿ ಬಿ.ಎಸ್ ವೈ ಯಾವ ಒತ್ತಡಕ್ಕೆ ಮಣಿಯಬಾರದು ಎಂದು ಆಗ್ರಹಿಸಿದರು. ವಾಲ್ಮೀಕಿ ಪೀಠದ ಸ್ವಾಮಿಗಳು ರಮೇಶ ಅವರ ಅಣತಿಯಂತೆ ಕುಣಿಯುತ್ತಿದ್ದಾರೆ. ಅವರಿಬ್ಬರ ವೀಡಿಯೋ ಸಂಭಾಷಣೆ ಸುಳ್ಳಾಗಲ್ಲ. ಯುವತಿಗೆ ಧೈರ್ಯ ತುಂಬಬೇಕು. ಆರೋಪಿ ಜೊತೆಗೆ ಸರಕಾರದ ನಡೆದುಕೊಳ್ಳುವ ರೀತಿ ಸರಿಯಲ್ಲ ಎಂದು ಕಿಡಿಕಾರಿದರು. ಡಿಕೆಶಿ ವಿರುದ್ಧ ಸುಳ್ಳು ಆರೋಪ ಹಾಗೂ ಅವಾಚ್ಯ ಶಬ್ದಗಳ ಬಳಕೆ ಬಿಜೆಪಿ ಸಂಸ್ಕೃತಿ ತೋರಿಸುತ್ತದೆ ಎಂದು ಗುಡುಗಿದ್ದಾರೆ.
ಆರು ಸಚಿವರು ಸಾಚಾ ಇದ್ದರೆ ತಡೆಯಾಜ್ಞೆ ತರುತ್ತಿರಲಿಲ್ಲ ಎಂದು ಕುಟುಕಿದರು.
ಯುವತಿಯನ್ನು ಲೈಂಗಿಕವಾಗಿ ಬಳಕೆ ಮಾಡಿದ್ದಾರೆ. ಎಸ್ ಐಟಿ ಮೇಲೆ ಭರವಸೆ ಇಲ್ಲ. ಹೀಗಾಗಿ ಯುವತಿ ಜಡ್ಜ್ ಮುಂದೆ ಹೇಳಿದ್ದಾಳೆ.
ಪತ್ರಿಕಾಗೋಷ್ಠಿಯಲ್ಲಿ ಆನಂದ ಜಾಧವ, ನಾಗರಾಜ ಗುರಿಕಾರ, ದೇವಕಿ ಯೋಗಾನಂದ ಉಪಸ್ಥಿತರಿದ್ದರು.