ಧಾರವಾಡ prajakiran.com : ವೇಗವಾಗಿ ಬಂದ ಅಂಬುಲೆನ್ಸ್ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಧಾರವಾಡದ ಉದಯಗಿರಿ ಕ್ರಾಸ್ ಸತ್ತೂರು ಬಳಿ ಗುರುವಾರ ಸಂಜೆ ಸಂಭವಿಸಿದೆ.
ಹುಬ್ಬಳ್ಳಿ ಕಡೆಯಿಂದ ಧಾರವಾಡ ನಗರದ ಕಡೆಗೆ ಬರುತ್ತಿದ್ದ ಅಂಬುಲೆನ್ಸ್ ವಾಹನ ಏಕಾ ಏಕಿ ಪಲ್ಟಿಯಾಗಿದ್ದರಿಂದ ಅಂಬುಲೆನ್ಸ್ ವಾಹನ ಜಖಂಗೊಂಡಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ತಿಳಿದುಬಂದಿದೆ. ಘಟನೆಯಿಂದ ಕೆಲ ಕಾಲ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿತ್ತು.
ಮಾಹಿತಿಘಟನಾ ಸ್ಥಳಕ್ಕೆ ಆಗಮಿಸಿದ ಧಾರವಾಡ ಸಂಚಾರಿ ಪೊಲೀಸರು ಕುರಿತು ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.