ಹುಬ್ಬಳ್ಳಿ prajakiran.com : ಹಳೆ ಹುಬ್ಬಳ್ಳಿಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಮುಖಂಡ ಮಹಮ್ಮದ್ ಆರೀಫ್ ಎಂಬುವವನನ್ನು ಹಳೆ ಹುಬ್ಬಳ್ಳಿ ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಗಲಭೆ ನಡೆದ ದಿನ ಪೊಲೀಸರ ಜತೆ ವಾಗ್ವಾದ ಮಾಡಿದ್ದ ಆರೀಫ್ ಗಲಾಟೆ ರೂವಾರಿ ಎಂಬ ಶಂಕೆ ಪೊಲೀಸರಿಗೆ ಕಾಡಿದೆ.
ಹೀಗಾಗಿ ವಶಕ್ಕೆ ಪಡೆದಿದ್ದು, ಗಲಾಟೆಗೆ ಪ್ರಚೋದನೆ ನೀಡಿದ್ದ ಆರೋಪ ಹಾಗೂ ಮೊದಲ ಮಾಸ್ಟರ್ ಮೈಂಡ್ ವಾಸೀಂ ಪಠಣಾ್ ಹಾಗೂ ಎರಡನೇ ಮಾಸ್ಟರ್ ಮೈಂಡ್ ಇತನೇ ಎಂದು ಬಿಂಬಿತವಾಗಿತ್ತು.
ಹೀಗಾಗಿ ಎಐಎಂಐಎಂ ಮುಖಂಡ ಮಹಮ್ಮದ್ ಆರೀಫ್ ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನೂ ಘಟನೆ ನಡೆದು ನಾಲ್ಕು ದಿನಗಳು ಕಳೆದರೂ ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡಿರುವ ಮೌಲ್ವಿ ವಾಸಿಂ ಪಠಾಣ್ ಜತೆ ಪೊಲೀಸ್ ಇನ್ಸ್ಪೆಕ್ಟರ್ ಜೊತೆ ವಾದ ಮಾಡಿದ್ದ ಮಹಮ್ಮದ್ ಆರೀಫ್ ಗಲಭೆಯ ನಂತರ ಇತನು ತಲೆ ಮರೆಸಿಕೊಂಡಿದ್ದ.
ಇದೀಗ ಆರೀಫ್ ನನ್ನು ವಶಕ್ಕೆ ಪಡೆದಿರುವ ಹಳೆ ಹುಬ್ಬಳ್ಳಿ ಪೊಲೀಸರು ಗಲಭೆಯಲ್ಲಿ ಆರೀಫ್ ಪಾತ್ರದ ಕುರಿತು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.