ಹುಬ್ಬಳ್ಳಿ prajakiran. com : ಹಳೇ ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಅಮಾಯಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ನೇತೃತ್ವದಲ್ಲಿಂದು ನಿಯೋಗವೊಂದು ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿದರು.
ಶನಿವಾರ ಆನಂದನಗರದ ನಿವಾಸಿ ಅಭಿಷೇಕ ಹಿರೇಮಠ ಎಂಬಾತ ಹಾಕಿದ್ದ ಪೋಸ್ಟ್ ಪರಿಣಾಮ ಹುಬ್ಬಳ್ಳಿ ಹೊತ್ತಿ ಉರಿದಿತ್ತು.
ಈ ಹಿನ್ನೆಲೆಯಲ್ಲಿ ನೂರಾರು ಜನರು ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಆಸ್ಪತ್ರೆ, ದೇವಾಲಯ ಹಾಗೂ ಪೊಲೀಸ್ ವಾಹನಗಳನ್ನು ಜಖಂಗೊಳಿಸಿದ್ದರು.
ಅಲ್ಲದೆ, ಸಾರ್ವಜನಿಕ ಆಸ್ತಿಪಾಸ್ತಿಗಳು ನಾಶವಾಗಿದ್ದವು. ಇದರಿಂದ ಹುಬ್ಬಳ್ಳಿಯ ಶಾಂತಿಗೆ ಭಂಗವುಂಟಾಯಿತು. ಜನರು ವಿಚಲಿತಗೊಂಡಿದ್ದರು.
ಪೊಲೀಸರು ತನಿಖೆ ಕೈಗೊಂಡು ನೂರಾರು ಗಲಭೆಕೋರರನ್ನು ಬಂಧಿಸಿದ್ದರು. ಆದರೆ ಇವರಲ್ಲಿ ಅಮಾಯಕರನ್ನು ಪೊಲೀಸರು ಬಂಧಿಸಿ ಕಿರುಕುಳ ನೀಡುತ್ತಿದ್ದಾರೆ.
ಹೀಗಾಗಿ ಅಮಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಇನ್ನೂ ಘಟನೆಗೆ ಸಂಬಂಧಿಸಿದಂತೆ ಹಲವಾರು ಶಂಕೆಗಳನ್ನು ವ್ಯಕ್ತವಾಗಿದೆ. ಕುಲುಂಕುಷವಾಗಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ನಿಯೋಗ ಪೊಲೀಸ್ ಕಮೀಷನರ್ ಗೆ ಮನವಿ ಮಾಡಿದ್ದಾರೆ.
ನಿಯೋಗದಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ, ಅನಿಲಕುಮಾರ್ ಪಾಟೀಲ್, ಅಲ್ತಾಪ್ ಹಳ್ಳೂರ, ನಾಗರಾಜ ಛಬ್ಬಿ, ಅಲ್ತಾಪ್ ನವಾಜ್ ಕಿತ್ತೂರ ಸೇರಿದಂತೆ ಮುಂತಾದವರು ಇದ್ದರು.