ಧಾರವಾಡ prajakiran.com : ನಿನ್ನೆ ರಾತ್ರಿ ಸುರಿದ ಮಳೆಗೆ ಧಾರವಾಡ ಜಿಲ್ಲೆಯ ಬಹುತೇಕ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ಜಿಲ್ಲೆಯ ತುಪ್ಪರಿಹಳ್ಳ ಮಳೆಯಿಂದಾಗಿ ಹರಿವಿನ ಹೆಚ್ಚಳವಾಗಿದೆ ಎಂದು ರೈತರು ಹಾಗೂ ಪ್ರತ್ಯಕ್ಷದರ್ಶಿಗಳು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.
ಇದೇ ವೇಳೆ ಧಾರವಾಡ ತಾಲೂಕಿನ ಧಾರವಾಡ ಸವದತ್ತಿ ರಾಜ್ಯ ಹೆದ್ದಾರಿಯಲ್ಲಿರುವ ಹಾರೋಬೆಳವಡಿ ಸೇತುವೆಯಲ್ಲಿ ಲಾರಿಯೊಂದು ಸಿಲುಕಿಕೊಂಡಿದೆ.
ಮಳೆಯಿಂದಾಗಿ ಧಾರವಾಡ–ಸವದತ್ತಿ ಮಾರ್ಗ ಮತ್ತೆ ಬಂದ್ ಆದಂತಾಗಿದೆ.
ಅಲ್ಲಿ ಸಿಲುಕಿರುವ ಲಾರಿಯನ್ನ ಹೊರೆತೆಗೆಯಲು ಸ್ಥಳೀಯರು ಹರಸಾಹಸ ನಡೆಸುತ್ತಿದ್ದಾರೆ.