ರಾಜ್ಯ

ಧಾರವಾಡ ರೈತನಿಗೆ ಭೂಸ್ವಾಧೀನ ಪರಿಹಾರ ನೀಡದ ಉಪವಿಭಾಗಧಿಕಾರಿ ವಾಹನ ಜಪ್ತಿಗೆ ಕೋರ್ಟ್ ಆದೇಶ

ಧಾರವಾಡ ಪ್ರಜಾಕಿರಣ.ಕಾಮ್ ಧಾರವಾಡ ತಾಲೂಕಿನ ಹೂಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಎಡದಂಡೆ ಕಾಲುವೆ ನಂ. 2 ನೇದ್ದರ ನಿರ್ಮಾಣದ ಕುರಿತಂತೆ ಧಾರವಾಡ ತಾಲೂಕ ಹೂಲಿಕೇರಿ ಗ್ರಾಮದ ರಿಸನಂ. 108/2 ಕ್ಷೇತ್ರ : 00ಎ-13 ಗುಂಟೆ ಜಮೀನನ್ನು ಭೂ ಮಾಲಿಕರಾದ ವೀರಣ್ಣ ತಂದೆ ಶೀದ್ಲಿಂಗಪ್ಪ ನಾಗಶೆಟ್ಟಿ ಸಾ|| ಹೂಲಿಕೇರಿ ತಾ|| ಅಳ್ನಾವರ ಇವರ ಹೆಸರಿನಲ್ಲಿ ಸದರಿ ಜಮೀನಿಗೆ ರೂ. 14,184/-ಗಳನ್ನು ನಿಗದಪಡಿಸಿ ಐತೀರ್ಪು ಘೋಷಣೆ ಮಾಡಿ ಭೂ-ಸ್ವಾಧೀನ ಪಡಿಸಿಕೊಂಡಿದ್ದು ಇರುತ್ತದೆ.

ಸದರಿ ಜಮೀನಿನ ಭೂ ಮಾಲಿಕರು ಹೆಚ್ಚುವರಿ ಪರಿಹಾರ ಕೋರಿ ಭೂ ಸ್ವಾಧೀನ ಕಾಯ್ದೆ 1894 ರ ಕಲಂ 18 (1) ರಡಿ ಈ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿಗೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯದಲ್ಲಿ ದಾಖಲಾದ ಎಲ್.ಎ.ಸಿ ನಂ. 26/2013 ನೇದ್ದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ದಿವಾಣಿ ನ್ಯಾಯಾಲಯ ಧಾರವಾಡ ರವರು ಸದರಿ ಜಮೀನಿಗೆ ಪ್ರತಿ ಗುಂಟೆಗೆ ರೂ: 31,500/-ಗಳನ್ನು ನಿಗದಿಪಡಿಸಿ ಆದೇಶಿಸಿದ್ದು ಇರುತ್ತದೆ.

ಮಾನ್ಯ ನ್ಯಾಯಾಲಯದ ಆದೇಶದನ್ವಯ ಸದರಿ ಪ್ರಕರಣಗಳಲ್ಲಿ ಒಟ್ಟು ರೂ: 20,42,792/- ಗಳನ್ನು ಮಾನ್ಯ ನ್ಯಾಯಾಲಯಕ್ಕೆ ಭರಣಾ ಮಾಡಬೇಕಾಗಿದ್ದು, ಈ ಕುರಿತಂತೆ ಭೂ ಕೋರಿಕೆ ಸಂಸ್ಥೆಯವರಾದ ಕಾರ್ಯನಿರ್ವಾಹಕ ಇಂಜನೀಯರರು, ಸಣ್ಣ ನೀರಾವರಿ ಇಲಾಖೆ ಧಾರವಾಡ ಇವರು ರೂ: 17,85,308/-ಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಣವನ್ನು ಈಗಾಗಲೇ ಭರಣಾ ಮಾಡಿದ್ದು ಬಾಕಿ ಮೊತ್ತ ರೂ: 2,57,484/-ಗಳನ್ನು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮಾನ್ಯ ನ್ಯಾಯಾಲಯಕ್ಕೆ ಹಣವನ್ನು ಭರಣಾ ಮಾಡದ ಕಾರಣ ಸರ್ಕಾರದ ಹಂತದಲ್ಲಿ ಭೂಸ್ವಾಧೀನ ಅಧಿಕಾರಿಯಾಗಿರುವ ಉಪವಿಭಾಗಾಧಿಕಾರಿಗಳ ವಾಹನ ಜಪ್ತಿಯಾಗಿರುತ್ತದೆ ಎಂದು ಎ.ಸಿ. ಅವರು ತಿಳಿಸಿದ್ದಾರೆ.

ಈಗಾಗಲೇ ದಿನಾಂಕ: 03-03-2023 (ಶುಕ್ರವಾರ) ರಂದು ಸಣ್ಣ ನೀರಾವರಿ ಇಲಾಖೆಗೆ ಸರ್ಕಾರದಿಂದ ರೈತರಿಗೆ ನೀಡಬೇಕಾಗಿರುವ ಬಾಕಿ ಮೊತ್ತ ಬಿಡುಗಡೆಯಾಗಿದ್ದು, ಸೋಮವಾರ ದಿನಾಂಕ: 06-03-2023 ರಂದು ನ್ಯಾಯಾಲಯಕ್ಕೆ ಜಮೆ ಮಾಡುವುದಾಗಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು  ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *