ಕಳಚಿದ ರೈತ ಚಿಂತನೆಯ ಕೊಂಡಿ
ಧಾರವಾಡ ಪ್ರಜಾಕಿರಣ.ಕಾಮ್ : ತಾಲೂಕಿನ ನರೇಂದ್ರ ಗ್ರಾಮದ ಹಿರಿಯರು, ಪ್ರಗತಿಪರ ರೈತರು, ರೈತ ಹೋರಾಟಗಾರ ಖಂಡೇಶ್ವರ ಬಸವಂತಪ್ಪ ನರೇಂದ್ರ (ಈಳಿಗೇರ) (80) ಗುರುವಾರದಂದು ನಿಧನ ಹೊಂದಿದರು.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.
ಗ್ರಾಮದ ಪ್ರತಿಷ್ಠಿತ ಈಳಿಗೇರ ರೈತ ಕುಟುಂಬದಲ್ಲಿ ಜನಿಸಿದ ಅವರು ಇಂಜಿನೀಯರಿಂಗ್ ಪದವಿ ಪಡೆದಿದ್ದರು.
ಅಂದಿನ ರೈತ ನಾಯಕರಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಬಾಬಾಗೌಡ ಪಾಟೀಲ, ಎಚ್.ಎಸ್. ರುದ್ರಪ್ಪ, ಪುಟ್ಟಣ್ಣಯ್ಯ ಅವರ ಜೊತೆ ರೈತ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದರು.
ಒಂದು ಬಾರಿ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತದಲ್ಲಿ ರೈತ ಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಹಲವಾರು ಸಂಘ-ಸಂಸ್ಥೆಗಳ ಜೊತೆ ಸೇರಿ ಸದಾ ಸಮಾಜಮುಖಿ ಕಾರ್ಯಗಳನ್ನು ಕೈಕೊಂಡಿದ್ದರು.
ಎರಡು ಅವಧಿಗೆ ಧಾರವಾಡ
ಎಪಿಎಂಸಿ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದರು.
ಅವರು ಪತ್ನಿ, ಮೂವರು ಪುತ್ರರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.
*20 ರಂದು ಅಂತ್ಯಕ್ರಿಯೆ*
ಖಂಡೇಶ್ವರ ನರೇಂದ್ರ ಅವರ ಅಂತ್ಯಕ್ರಿಯೆ ದಿ.20 ರಂದು ಬೆಳಗ್ಗೆ 10 ಗಂಟೆಗೆ ಗ್ರಾಮದ ಮಳೆಪ್ಪಜ್ಜನ ಮಠದ ಹಿಂದಿರುವ ಈಳಿಗೇರ ಅವರ ತೋಟದಲ್ಲಿ ನೆರವೇರಲಿದೆ.