ಧಾರವಾಡ ಪ್ರಜಾಕಿರಣ. ಕಾಮ್ : ಧಾರವಾಡ ತಾಲೂಕಿನ ಹೊಸತೇಗೂರ ಗ್ರಾಮದ ಬಳಿಯ ಚೆಕ್ ಪೊಸ್ಟ್ನಲ್ಲಿ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ಗರಗ ಪೊಲೀಸರು ಬಂಧಿಸಿದ್ದಾರೆ.
ಸಂಜೀವ ಹಿರೇಮಠ ಎಂಬಾತ ಬೆಳಗಾವಿಯಿಂದ ಹುಬ್ಬಳ್ಳಿ ಕಡೆಗೆ ಇನ್ನೋವಾ ಕಾರಿನಲ್ಲಿ ಹೊರಟಿದ್ದ.
ಆತನ ಕಾರಿನ ಡಿಕ್ಕಿಯಲ್ಲಿ 53 ಲಕ್ಷ ರೂ. ನಗದು ಹಣವನ್ನು ಸಾಗಿಸುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಚೆಕ್ ಪೊಸ್ಟ್ ನಲ್ಲಿ ತಡೆದು ಹಣವನ್ನು ವಶಕ್ಕೆ ಪಡೆದು ಆತನ ಬಗ್ಗೆ ಹಾಗೂ ಹಣಕಾಸು ಕುರಿತು ಹೆಚ್ಚಿನ ಮಾಹಿತಿಗಾಗಿ ಠಾಣೆಗೆ ಕರೆ ತಂದಿದ್ದಾರೆ.
ನಂತರ ಪೊಲೀಸ್ ಠಾಣಾ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿದ್ದು, ಹಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡುವಂತೆ ಗರಗ ಠಾಣಾ ಪೊಲೀಸರು ಆತನಿಗೆ ನೋಟಿಸ್ ನೀಡಿದ್ದಾಗಿ ತಿಳಿಸಿದ್ದಾರೆ.