ಚಿತ್ರದುರ್ಗ prajakiran.com : ಧಾರವಾಡದ ಹಿರಿಯ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ ಚಿತ್ರದುರ್ಗದಲ್ಲಿ ಇರುವ ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡರು.
ಅವರಿಗೆ ಧಾರವಾಡ ಜಿಲ್ಲೆಯ ಬಿಜೆಪಿ ಮುಖಂಡರು ಸಾಥ್ ನೀಡಿ, ಅಭಿನಂದಿಸಿ ತಮ್ಮ ಸಂತಸ ಹಂಚಿಕೊಂಡರು.
ಅ ಬಳಿಕ ಇಂತಹ ಮಹತ್ವದ ಹುದ್ದೆ ಕೊಡಿಸಲು ಕಾರಣಿಕರ್ತರಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರನ್ನು ಭೇಟಿ ಮಾಡಿ ಸನ್ಮಾನಿಸಿ ಗೌರವಿಸಿದರು.
ಅಲ್ಲದೆ, ತಮಗೆ ಇಂತಹ ಮಹತ್ವದ ಹುದ್ದೆ ನೀಡಿದ್ದು, ಅದಕ್ಕೆ ಹೊಸರೂಪುರೇಷೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲು ಹಗಲು ರಾತ್ರಿ ಎನ್ನದೆ ಕಾಲಿಗೆ ಚಕ್ರ ಕಟ್ಟಿಕೊಂಡು ಹದಿನಾಲ್ಕು ಜಿಲ್ಲೆಯ ವ್ಯಾಪ್ತಿಯಲ್ಲಿ ಸಂಚರಿಸುವ ಭರವಸೆ ನೀಡಿದರು.
ಇದೇವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೂಡ ತವನಪ್ಪ ಅಷ್ಟಗಿಯವರಿಗೆ ಸನ್ಮಾನಿಸಿ ಗೌರವಿಸಿ, ಉತ್ತಮ ರೀತಿಯಲ್ಲಿ ಶ್ರಮಿಸುವಂತೆ ಸಲಹೆ ನೀಡಿ ಅಭಿನಂದಿಸಿದರು.