ಧಾರವಾಡ prajakiran. com : ಜಲಮಂಡಳಿ ಗುತ್ತಿಗೆ ನೌಕರರನ್ನು ವಜಾಗೊಳಿಸಿರುವುದನ್ನು ಖಂಡಿಸಿ, ಕಾಂಗ್ರೆಸ್ ಬೆಂಬಲದೊಂದಿಗೆ ದಿನಗೂಲಿ ನೌಕರರು ಧರಣಿ ಕೈಗೊಂಡರೂ ಬೇಡಿಕೆಗಳಿಗೆ ಸ್ಪಂದನೆ ಸಿಗದ ಕಾರಣ ಭಾನುವಾರ ಬೆಳಿಗ್ಗೆ ಧಾರವಾಡ ಜಲಮಂಡಳಿ ಕಚೇರಿಯಿಂದ ಹುಬ್ಬಳ್ಳಿಯ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದವರೆಗೆ ಪಾದಯಾತ್ರೆ ನಡೆಸಿದರು.
ಪಾದಯಾತ್ರೆಯ ಪೂರ್ವದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತಮಾಡಿದ
ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಸರಕಾರ ಹಾಗೂ ಜಲ ಮಂಡಳಿ ನೌಕರರ ಗುದ್ದಾಟದಲ್ಲಿ ಜನರು ಪರದಾಡುವಂತಾಗಿದೆ ಎಂದು ಕಿಡಿಕಾರಿದರು.
ನೀರು ಸರಬರಾಜು ನೌಕರರ ಧರಣಿಯಿಂದ ನಗರದಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದ್ದು , ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಗಿದೆ.
ಈ ಅಂಶಗಳನ್ನು ಗಮನಿಸಿ ಸರಕಾರ ಕೂಡಲೇ ನೌಕರರ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಸುಮಾರು 600 ನೌಕರರು ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ . ಗುತ್ತಿಗೆ ಆಧಾರದಲ್ಲಿ ಎಲ್ ಆ್ಯಂಡ್ಟಿ ಸೇರ್ಪಡೆ ಆಗದಿದ್ದರೆ ಹೊಸಬರ ನೇಮಕ ಕುರಿತು ಬೆದರಿಕೆ ಒಡ್ಡುತ್ತಿರುವದು ಸರಿಯಲ್ಲ.
ನೌಕರರು ಯಾವ ಬೆದರಿಕೆಗೂ ಬಗ್ಗುವುದಿಲ್ಲ. ಬೇಡಿಕೆಗೆ ಒಪ್ಪಿದರೆ ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾದಯಾತ್ರೆಯಲ್ಲಿ ಜಲಮಂಡಳಿ ದಿನಗೂಲಿ, ಗುತ್ತಿಗೆ ಹಾಗೂ ಹಂಗಾಮಿ ನೌಕರರ ಸಂಘದ ಅಧ್ಯಕ್ಷ ವಿ.ಎನ್.ಹಳಕಟ್ಟೆ, ಕಾಂಗ್ರೆಸ್ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ,ಮಾಜಿ ಶಾಸಕ ಎನ್.ಎಚ್ . ಕೋನರಡ್ಡಿ , ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ , ಕಾಂಗ್ರೆಸ್ ವಕ್ತಾರ ಪಿ ಎಚ್. ನೀರಲಕೇರಿ, ಪ್ರಕಾಶ ಕ್ಯಾರಕಟ್ಟಿ , ದೇವಕಿ ಯೋಗಾನಂದ, ವಸಂತ ಅಕಾ೯ಚಾರಿ, ಮೋಹನ ಹಿರೇಮನಿ , ಸ್ವಾತಿ ಮಾಳಗಿ, ಸಂಘದ ಮುಖಂಡರಾದ ಸಂತೋಷ ಹಿರೇಮಠ , ಮಂಜುನಾಥ ಪಾಟೀಲ, ಬಸವರಾಜ ದೇಸಾಯಿ, ಬಸವರಾಜ, ಮುಕ್ಕಲ, ಮಹಾಂತೇಶ ಗೌಡರ , ಮಿಥುನ, ಸಿ.ಎಂ ದೇಶಪಾಂಡೆ ಇನ್ನಿತರರು ಭಾಗವಹಿಸಿದ್ದರು.