ಮೈಸೂರು Prajakiran. com : ದರ್ಶನ್ ದಲಿತ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಆರೋಪದ ವಿಚಾರವಾಗಿ ಮಾತನಾಡಿರುವ ಸಂದೇಶ್ ನಾಗರಾಜ್ ಅವರ ಪುತ್ರ ಈ ಘಟನೆ ನಡೆದಿರುವುದು ನಿಜ ಎಂದು ಹೇಳಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂದೇಶ್ ನಾಗರಾಜ್ ಅವರ ಪುತ್ರ, ಈ ಘಟನೆ ನಡೆದಿರುವುದು ಸತ್ಯ.
ಇದು ಲಾಕ್ಡೌನ್ ಗೂ ಮುಂಚೆ ನಡೆದಿರುವ ಘಟನೆ. ಘಟನೆ ನಡೆದ ಸಂದರ್ಭದಲ್ಲಿ ನಾನು ಅಲ್ಲಿಯೇ ಇದ್ದೆ. ಆದರೆ ದರ್ಶನ್ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿಲ್ಲ ಬೈದಿದ್ದಾರೆ ಅಷ್ಟೆ ಎಂದು ಹೇಳಿದ್ದಾರೆ.
ಗ್ರಾಹಕರು ಕೆಲವೊಮ್ಮೆ ಕುಡಿದು ಬೈಯುತ್ತಾರೆ ನಾವು ಬೈಸಿಕೊಳ್ಳಬೇಕು ಏಕೆಂದರೆ ಅವರು ನಮ್ನ ಗ್ರಾಹಕರು, ವ್ಯಾಪಾರ ಮಾಡಲೇ ಬೇಕಲ್ಲವೇ ಎಂದು ಹೇಳಿಕೆ ನೀಡಿದ್ದಾರೆ.
ರಾತ್ರಿ 12:30 ಸಮಯ ಆಗಿತ್ತು. ಆತ ಮಹಾರಾಷ್ಟ್ರ ಹುಡುಗ, ಆತ ಹಿಂದಿಯಲ್ಲಿ ಮಾತನಾಡುತ್ತಿದ್ದ,
ದರ್ಶನ್ ಕನ್ನಡದಲ್ಲಿ ಬೈದಿದ್ರು. ಈ ಸಂದರ್ಭದಲ್ಲಿ ನಾನು ಗಲಾಟೆ ಮಾಡಬೇಡಿ ನೀವು ರೂಮಿಗೆ ಹೋಗಿ ಎಂದು ದರ್ಶನೆ ಗೆ ಹೇಳಿದ್ದೆ. ಆಗ ದರ್ಶನ್ ಕೋಪಗೊಂಡಿದ್ದರು ಎಂದರು.
ನನ್ನ ಕಾರ್ಮಿಕ ಪರವಾಗಿ ನಾನು ಯಾವತ್ತು ನಿಲ್ಲುತ್ತೇನೆ. ಈ ಘಟನೆ ವಿಚಾರವಾಗಿ ನಾನು ಕಾರ್ಮಿಕರ ಬಳಿ ಕ್ಷಮೆ ಕೇಳಿದ್ದೇನೆ ಎಂದು ಹೇಳಿದ್ದಾರೆ.