ಉ.ಪ್ರದೇಶ್ prajakiran.com : ಗಾಜಿಪುರ ಜಿಲ್ಲೆಯ ಗಂಗಾ ನದಿಯಲ್ಲಿ ಮರದ ಪೆಟ್ಟಿಗೆಯೊಂದು ತೇಲಿ ಬಂದಿದ್ದು, ಅದರಲ್ಲಿ ಹೆಣ್ಣು ಮಗು ಪತ್ತೆಯಾಗಿದೆ.
ದೋಣಿ ಸಿಬ್ಬಂದಿಗೆ ದಾದ್ರಿ ಘಾಟ್ ಬಳಿ ಜೋರಾಗಿ ಮಗು ಅಳುತ್ತಿರುವುದು ಕೇಳಿಸಿದೆ.
ಕೆಲ ಹೊತ್ತಿನಲ್ಲೇ ಮರದ ಪೆಟ್ಟಿಗೆಯೊಂದು ತೇಲಿ ಬರುತ್ತಿರುವುದನ್ನು ಕಂಡಿದ್ದಾರೆ. ಪೆಟ್ಟಿಗೆಯ ಬಳಿ ತೆರಳಿ ತೆರೆದು ನೋಡಿದ್ದಾರೆ. ದುಪಟ್ಟಾದಲ್ಲಿ ಸುತ್ತಲಾಗಿದ್ದ ಹೆಣ್ಣು ಮಗು ಕಾಣಿಸಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಮಗುವನ್ನು ಆಶಾ ಜ್ಯೋತಿ ಕೇಂದ್ರಕ್ಕೆ ಕರೆದೊಯ್ಯಾಗಿದೆ.
ಹಾಗೆಯೇ ಆಸ್ಪತ್ರೆಗೆ ಕರೆದೊಯ್ಯದು ತಪಾಸಣೆ ನಡೆಸಲಾಗಿದೆ. ಈ ಮಗುವಿಗೆ ‘ಗಂಗಾ’ ಎಂದು ಹೆಸರಿಡಲಾಗಿದೆ.
ಉತ್ತರ ಪ್ರದೇಶ ಸರ್ಕಾರ ಈ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.