ಹುಬ್ಬಳ್ಳಿ prajakiran.com : ಹಳಿಯಾಳದ ಬಿಜೆಪಿ ಮುಖಂಡ ಹಾಗೂ ಹಿಂದು ಮಹಾಸಭಾದ ರಾಜ್ಯಾಧ್ಯಕ್ಷರಾಗಿದ್ದ ರಾಜು ಧೂಳಿ ಶನಿವಾರ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕರೋನಾ ಸೋಂಕಿನಿಂದ ವಿಧಿವಶರಾದರು.
ಅವರು ಕಳೆದ ಹಲವು ದಿನಗಳಿಂದ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು.
ಅವರ ತಾಯಿಗೆ ಕೂಡ ಕರೋನಾ ಸೋಂಕು ತಗುಲಿದ ಪರಿಣಾಮ ಕಳೆದ ಮೂರುನಾಲ್ಕು ದಿನಗಳ ಹಿಂದೆಯಷ್ಟೇ ಇಹಲೋಕ ತ್ಯಜಿಸಿದ್ದರು.
ತಾಯಿಯವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಆಕ್ಸಿಜನ್ ಧರಿಸಿಯೇ ಬಂದು ಗಮನ ಸೆಳೆದಿದ್ದ ರಾಜು ಧೂಳಿ ಇಂದು ಚಿಕಿತ್ಸೆ ಫಲಿಸದೆ ನಿಧನ ಹೊಂದಿದರು.
ಅವರ ಅಗಲಿಕೆ ಬಿಜೆಪಿ ಹಾಗೂ ಹಿಂದು ಮಹಾಸಭಾಕ್ಕೆ ತುಂಬಲಾರದ ನಷ್ಟವಾಗಿದೆ.
ಒಬ್ಬ ಹಿಂದು ಹೋರಾಟಗಾರನ ಕಳೆದುಕೊಂಡ ಹಿಂದು ಸಂಘಟನೆಯಗಳು ಬಡವಾಗಿವೆ ಎಂದು ಅನೇಕರು ಕಂಬನಿ ಮಿಡಿದಿದ್ದಾರೆ.