ಜಿಲ್ಲೆ

ಧಾರವಾಡದ ಬಿಜೆಪಿ ಮಾಜಿ ಅಧ್ಯಕ್ಷ ಬಸವರಾಜ ವಿಭೂತಿ ಕೋವಿಡ್ ನಿಂದ ಸಾವು…!

ಧಾರವಾಡ prajakiran.com : ಧಾರವಾಡದ ಕಲ್ಯಾಣ ನಗರ ಮೂರನೇ ಕ್ರಾಸ್ ನಿವಾಸಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಬಿ ಜೆ ಪಿ ಯ ಮಾಜಿ ಜಿಲ್ಲಾ ಅಧ್ಯಕ್ಷ ಬಸವರಾಜ ವಿಭೂತಿ (83)  ಕೋವಿಡ ಸೂಂಕಿನಿಂದ ಶನಿವಾರ ಹುಬ್ಬಳ್ಳಿಯ ಕೆ ಎಮ್ ಸಿ ಯಲ್ಲಿ ನಿಧನ ಹೊಂದಿದರು.

ಅವರು ಎಸ್ ಎಸ್ ಎಲ್ ಸಿ ಬಂಧು ಮಾಸಿಕ ಪುಸ್ತಕದ ಸಂಪಾದಕ, ಪ್ರಕಾಶಕರಾಗಿದ್ದರು .  

ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ  ಕಾಯ೯ಕತ೯ರಾಗಿದ್ದರು.

ಮೃತರಿಗೆ ಎರಡು ಗಂಡು ಹಾಗೂ ಮೂರು ಹೆಣ್ಣು ಮಕ್ಕಳು ಮತ್ತು ಅಪಾರ  ಬಂಧು ಬಳಗ ಇದ್ದಾರೆ.

ಬಿಜೆಪಿಯ ಹಿರಿಯರು, ಅಖಂಡ ಧಾರವಾಡ ಜಿಲ್ಲೆಯ ಹಿಂದಿನ ಬಿಜೆಪಿ ಅಧ್ಯಕ್ಷರು ಆಗಿದ್ದ ವಿಭೂತಿ ಅವರು ಧಾರವಾಡ ಲಿಂಗಾಯತ ನೇಕಾರ ಸಮಾಜದ ಹಿರಿಯರು.

ಅವರಿಗೆ ಆಧುನಿಕ ರೈತ ಪ್ರಶಸ್ತಿ ಕೂಡ ಲಭಿಸಿತ್ತು. 

ಭಗವಂತನು ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಅನೇಕ ಬಿಜೆಪಿ ಮುಖಂಡರು ಕಂಬನಿ ಮಿಡಿದಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *