ಹುಬ್ಬಳ್ಳಿ prajakiran.com : ರಾಜ್ಯದ ೨೫ ಬಿಜೆಪಿ ಲೋಕಸಭಾ ಸದಸ್ಯರಿಂದ ರಾಜ್ಯ ಅಭಿವೃದ್ಧಿ ಆಗದ ಹಿನ್ನೆಲೆಯಲ್ಲಿ, ಲೋಕಸಭಾ ಸದಸ್ಯರನ್ನು ಹರಾಜು ಹಾಕುವುದರ ಮೂಲಕ ವಾಟಾಳ್ ನಾಗಾರಾಜ್ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ವಿನೂತನವಾಗಿ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದರು.
ಉತ್ತರ ಕರ್ನಾಟಕ ಪ್ರವಾಹ, ಅತೀವೃಷ್ಠಿ, ಅನಾವೃಷ್ಠಿಯಿಂದ ತತ್ತರಿಸಿದೆ. ಆದರೂ ಉತ್ತರ ಕರ್ನಾಟಕವನ್ನು ಹಾಗೂ ರಾಜ್ಯ ಸರ್ಕಾರವಾಗಲಿ ಅಥವಾ ರಾಜ್ಯದ ಲೋಕಸಭಾ ಸದಸ್ಯರಾಗಲಿ ಅನುದಾನ ತಂದುಅಭಿವೃದ್ಧಿ ಮಾಡುತ್ತಿಲ್ಲ.
ಆ ಕಾರಣಕ್ಕಾಗಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರನ್ನು ಒಂದು ರೂಪಾಯಿಗೆ ಹರಾಜು ಪ್ರಕ್ರಿಯೆ ಆರಂಭ ಮಾಡುವುದರ ಮೂಲಕ ಐದು ರೂಪಾಯಿಗೆ ಮುಗಿಸಿದರು.
ಐದು ರೂಪಾಯಿಗೆ ಎನ್. ಎಚ್ ಪಾಟೀಲರು ಖರೀದಿ ಮಾಡಿದರು.
ಕೊಪ್ಪಳದ ಸಂಸದ ಕರಡಿ ಸಂಗಣ್ಣನನ್ನು ಒಂದು ರೂಪಾಯಿಗೆ
ಬಾಲಕನೊಬ್ಬ ಖರೀದಿ ಮಾಡಿ ಗಮನ ಸೆಳೆದ.
ಹರಾಜಿನಲ್ಲಿ ಬಿಕರಿ ಆಗದ ಧಾರವಾಡ ಸಂಸದ ಪ್ರಹ್ಲಾದ ಜೋಶಿ, ಸದಾನಂದ ಗೌಡ,ಜಿ.ಎಂ ಸಿದ್ದೇಶ್ವರ, ಅನಂತಕುಮಾರ ಹೆಗೆಡೆ, ಬಿ.ವೈ ರಾಘವೇಂದ್ರ, ತೇಜಸ್ವಿ ಸೂರ್ಯ, ದೇವೆಂದ್ರೆಪ್ಪ, ಅಣ್ಣಾ ಸಾಹೇಬ್ ಜೊಲ್ಲೆ, ಪ್ರತಾಪ್ ಸಿಂಹ, ತುಮಕೂರು ಸಂಸದ ಬಸವರಾಜು, ಬಿ.ಡಿ ನಾಯಕ, ಬೀದರ ಸಂಸದ ಭಗವಂತ ಕೂಬಾ, ಡಿ. ಕೆ ಸುರೇಶ, ಪಿಸಿ ಗದ್ದಿಗೌಡರ, ಸುಮಲತಾ ಅಂಬರೀಶ, ಶಿವಕುಮಾರ್ ಉದಾಸಿ, ಪ್ರಜ್ವಲ ರೇವಣ್ಣ, ನಳೀನಕುಮಾರ್ ಕಟೀಲ್, ಪಿಸಿ ಮೋಹನ, ಬಿ.ಎನ್ ಬಚ್ಚೇಗೌಡ, ಶ್ರೀನಿವಾಸ ಪ್ರಸಾದ, ಶೋಭಾ ಕರಂದ್ಲಾಜೆ, ರಮೇಶ ಜಿಗಜಣಗಿ, ನಾರಾಯಣ ಸ್ವಾಮಿಯನ್ನು ಹರಾಜು ಹಾಕುವುದರ ಮೂಲಕ ವಿಭಿನ್ನವಾಗಿ ಪ್ರತಿಭಟನೆ ಮಾಡಿದರು.