ರಾಜ್ಯದಲ್ಲಿ 9102 ಜನ ಬಿಡುಗಡೆ
ಬೆಂಗಳೂರು prajakiran.com : ರಾಜ್ಯದಲ್ಲಿ ಶನಿವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 128 ಜನ ಸಾವನ್ನಪ್ಪಿದ್ದಾರೆ.
ಮತ್ತೆ ಹೊಸದಾಗಿ 9746 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ 3,89,232 ಕ್ಕೆ ಏರಿಕೆಯಾಗಿದೆ.
ಇಂದು ರಾಜ್ಯದಲ್ಲಿ 9102 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 2,83,298 ಜನ ಗುಣಮುಖರಾಗಿದ್ದು, 99,617 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 769 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ ಶನಿವಾರವೂ 128 ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 6298 ಕ್ಕೆ ಏರಿಕೆಯಾದಂತಾಗಿದೆ.
ಶನಿವಾರ ಪತ್ತೆಯಾದ ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿಯೇ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ.
ಬೆಂಗಳೂರಿನಲ್ಲಿ ಬರೋಬ್ಬರಿ 3093 ಜನ ಸೋಂಕಿತರು ಕಂಡು ಬಂದಿರುವುದು ಬೆಂಗಳೂರಿಗರನ್ನು ಮತ್ತೆ ಬೆಚ್ಚಿಬೀಳಿಸುವಂತೆ ಮಾಡಿದೆ.
ಇನ್ನೂಳಿದಂತೆ ಬಾಗಲಕೋಟೆ 144, ಬಳ್ಳಾರಿ 366, ಬೆಳಗಾವಿ 473, ಬೆಂಗಳೂರು ಗ್ರಾಮಾಂತರ 124, ಬೀದರ 119, ಚಾಮರಾಜನಗರ 31, ಚಿಕ್ಕಬಳ್ಳಾಪುರ 133, ಚಿಕ್ಕಮಗಳೂರು 238, ಚಿತ್ರದುರ್ಗ 240, ದಕ್ಷಿಣ ಕನ್ನಡ 377, ದಾವಣಗೆರೆ 395, ಧಾರವಾಡ 227, ಗದಗ 195, ಹಾಸನ 347, ಹಾವೇರಿ 188, ಕಲಬುರಗಿ 198, ಕೊಡಗು 28, ಕೋಲಾರ 112, ಕೊಪ್ಪಳ 243, ಮಂಡ್ಯ 246, ಮೈಸೂರು 790, ರಾಯಚೂರು 186, ರಾಮನಗರ 92, ಶಿವಮೊಗ್ಗ 346, ತುಮಕೂರು 192, ಉಡುಪಿ 175, ಉತ್ತರಕನ್ನಡ 207, ವಿಜಯಪುರ 103, ಯಾದಗಿರಿ 138 ಹೀಗೆ ಒಟ್ಟು 30 ಜಿಲ್ಲೆಗಳಲ್ಲಿ ಕರೋನಾ ವೈರಸ್ ತನ್ನ ಅಟ್ಟಹಾಸ ಮೆರೆದಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸಾವಿನ ರಣಕೇಕೆ ರಾಜ್ಯದಲ್ಲಿ ಶುಕ್ರವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 34, ಮೈಸೂರು 12, ದಕ್ಷಿಣ ಕನ್ನಡ 9, ಧಾರವಾಡ 8, ಶಿವಮೊಗ್ಗ 8, ದಾವಣಗೆರೆ 7, ಹಾಸನ 6, ಬಳ್ಳಾರಿ 5, ಚಿಕ್ಕಮಗಳೂರು, ಮಂಡ್ಯ, ಉಡುಪಿ ತಲಾ 4, ಬೆಂಗಳೂರು ಗ್ರಾಮಾಂತರ ಹಾಗೂ ಚಾಮರಾಜನಗರ, ಕೊಪ್ಪಳ, ಗದಗ ತಲಾ 3, ಬೀದರ ಹಾಗೂ ರಾಯಚೂರು, ರಾಮನಗರ ತಲಾ 3, ತುಮಕೂರು, ಉಡುಪಿ ಹಾಗೂ ತುಮಕೂರ, ವಿಜಯಪುರ ತಲಾ ಎರಡು, ಚಾಮರಾಜನಗರ, ಕಲಬುರಗಿ, ಚಿಕ್ಕಬಳ್ಳಾಪುರ, ಕೋಲಾರ ತಲಾ ಒಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.