ಅಪರಾಧ

ಧಾರವಾಡ, ಸವದತ್ತಿ, ಗೋಕಾಕ, ಮೂಡಲಗಿಯಲ್ಲಿ ಬೈಕ್ ಕಳ್ಳತನ ಮಾಡಿದ್ದ ಮೂವರ ಹೆಡೆಮುರಿ ಕಟ್ಟಿದ ಧಾರವಾಡ ಪೊಲೀಸರು

ಧಾರವಾಡ prajakiran. com :
ವಿವಿಧ ಕಡೆಗಳಲ್ಲಿ ಬೈಕ್ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಇಲ್ಲಿನ ಶಹರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಜಮಖಂಡಿ ತಾಲ್ಲೂಕಿನ ಹೊಸೂರ‌ ಗ್ರಾಮದ ಸಚಿನ ಮಲ್ಲಪ್ಪ ಗಿರಿಸಾಗರ, ಧಾರವಾಡ ನವಲೂರ ಗ್ರಾಮದ ವಿಠ್ಠಲ ಮೈಲಾರಪ್ಪ ಶಿವಪ್ಪನವರ ಮತ್ತು ಸುನೀಲ ಸುರೇಶ ಜಾಂಬೋಟಿ ಬಂಧಿತ ಆರೋಪಿಗಳು.

ಬಂಧಿತರಿಂದ 2.80 ಲಕ್ಷ‌ ರೂಪಾಯಿ ಮೌಲ್ಯದ 8 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಧಾರವಾಡ, ಸವದತ್ತಿ, ಗೋಕಾಕ, ಮೂಡಲಗಿ ಇನ್ನಿತರ ಕಡೆಗಳಲ್ಲಿ ಕಳ್ಳತನ ಮಾಡಿ‌ ಪರಾರಿಯಾಗಿದ್ದರು.

ಈ ಕುರಿತು ಶಹರ ಠಾಣೆಯಲ್ಲಿ ದಾಖಲಾದ ದೂರಿನನ್ವಯ ಸಿಪಿಐ ಪ್ರಭು ಗಂಗೇನಹಳ್ಳಿ ನೇತೃತ್ವದಲ್ಲಿ ‌ತನಿಖೆ ಕೈಕೊಳ್ಳಲಾಗಿತ್ತು.

ಪಿಎಸ್ ಆಯ್ ಗಳಾದ ಚಂದ್ರಶೇಖರ ಮದರಖಂಡಿ, ಸುನೀಲ ಎಚ್., ಸಿಬ್ಬಂದಿ ಗಳಾದ ಜಿ.ಜಿ.ಚಿಕ್ಕಮಠ, ಎನ್.ಎಚ್.ಗುಡಿಮನಿ, ಆರ್.ಆರ್. ಹೊಸಮನಿ, ಎಸ್.ಎಸ್. ತಿಪ್ಪಾಪೂರ, ಕೆ.ಬಿ.ಬೀರನೂರ ತನಿಖೆಯಲ್ಲಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *