ಕೊಡಗು prajakiran.com : ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಭಾಗಮಂಡಲದ ತಲಕಾವೇರಿಯಲ್ಲಿರುವ ಬ್ರಹ್ಮಗಿರಿ ಬೆಟ್ಟ ಕುಸಿತ ದಿಂದ ಐವರು ನಾಪತ್ತೆಯಾಗಿದ್ದರು.
ಇದರಿಂದಾಗಿ ಅರ್ಚಕ ನಾರಾಯಣಚಾರ್,ಅವರ ಪತ್ನಿ ಶಾಂತಾ, ಸಹಾಯಕಅರ್ಚಕರಾದ ರವಿಕಿರಣ ಹಾಗೂ ಶ್ರೀನಿವಾಸ ಮತ್ತು ಆನಂದತೀರ್ಥ ಅವರು ಕಣ್ಮರೆಯಾಗಿದ್ದರು.
ಹೀಗಾಗಿ ಕಳೆದ ಆರು ದಿನಗಳಿಂದ ಅವರ ಪತ್ತೆ ಕಾರ್ಯಕ್ಕೆ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಹಾಗೂ ಅಗ್ನಿ ಶಾಮಕದಳ, ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮಂಗಳವಾರ ನಾರಾಯಣಚಾರ್ ಮೃತ ದೇಹ ಪತ್ತೆಯಾಗಿದ್ದು, ಉಳಿದ ಮೂವರಿಗೆ ಶೋಧ ಕಾರ್ಯ ಮುಂದುವರೆದಿದೆ.
ಬೆಟ್ಟದಿಂದ ಮನೆ ಕುಸಿದ ಎರಡು ಕಿಮೀ ಕೊಚ್ಚಿಕೊಂಡು ಹೋಗಿತ್ತು. ಇವತ್ತು ಒಂದು ಕಿಲೋ ಮೀಟರ್ ದೂರ ನಾರಾಯಣಚಾರ್ ಅವರ ಶವ ಪತ್ತೆಯಾಗಿದೆ.
ಆದರೆ ಪತ್ನಿ ಶಾಂತಾ, ನಾರಾಯಣಾಚಾರ್ ಸಹಾಯಕ ಅರ್ಚಕರಾದ ಶ್ರೀನಿವಾಸ ಹಾಗೂ ರವಿಕಿರಣ ದೊರೆತಿಲ್ಲ.
ಇದರಿಂದಾಗಿ ಮೂವರಿಗೆ ಶೋಧ ಕಾರ್ಯ ನಡೆದಿದೆ. ಮನೆ ಕುಸಿದು ಆರು ದಿನಗಳು ಕಳೇದಿದ್ದವು. ಕಾರ್ಯಾಚರಣೆ ವೇಳೆ ಅವರು ಉಪಯೋಗಿಸಿದ್ದ ವಸ್ತುಗಳು ದೊರೆತಿದ್ದವು.
ಅದರಲ್ಲೂ ಅವರ ಬೈಕ್, ನಾಯಿ, ಕಾರು ಮತ್ತು 10 ಕ್ವಿಂಟಾಲ್ ಎಲಕ್ಕಿ, 30 ಚೀಲ ಕಾಳುಮೆಣಸು ಸಿಕ್ಕಿದೆ. ಕಂದಕದಲ್ಲಿ ಶವ ದೊರೆತಿದೆ.
ಹೀಗಾಗಿ ಮೂವರ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಇವತ್ತು ಕಾರ್ಯಾಚರಣೆ ಮುಗಿಯುವುದು ಕಷ್ಟ. ನಾರಾಯಚಾರ್ ಶವವನ್ನು ಬೆಟ್ಟಕಾಡು ಪ್ರದೇಶದಲ್ಲಿ ಅಂತ್ಯಕ್ರಿಯೆ ನೆರವೇರಿಸಲಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಬ್ರಹ್ಮಗಿರಿ ಬೆಟ್ಟ ಕುಸಿದು ಮನೆ ಕೊಚ್ಚಿಕೊಂಡು ಹೋಗಿದ್ದರಿಂದ ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್, ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಜಿಲ್ಲಾಡಳಿತ ಜೆಸಿಬಿ ಮೂಲಕ ರಕ್ಷಣಾ ಕಾರ್ಯ ನಡೆಸುತ್ತಿದೆ.
ನಿನ್ನೇ ಆನಂದತೀರ್ಥ ಅವರ ಶವ ಪತ್ತೆಯಾಗಿದ್ದು, ಐವರ ಪೈಕಿ ಇನ್ನೂಮೂವರು ಕಣ್ಮರೆಯಾದವರ ಪತ್ತೆಯಾಗಬೇಕಿದೆ.
ಅವರು ಸಾಕಿದ್ದ ಹತ್ತು ಹಸುಗಳು ಅವರ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನಗ, ನಾಣ್ಯ, ಬಂಗಾರ, ಬೆಳ್ಳಿದೊರಕಬೇಕಿದೆ ಎಂದು ಸ್ಥಳೀಯರು ಹೇಳಿದ್ದಾರೆ.