ಧಾರವಾಡ prajakiran.com : ನವಲಗುಂದ ತಾಲೂಕಿನ ಕಡದಳ್ಳಿ ಗ್ರಾಮದ ಹೊರವಲಯದಲ್ಲಿರುವ ಬೆಣ್ಣೆಹಳ್ಳದಲ್ಲಿ ಕಳೆದ ಎರಡು ದಿನಗಳ ಹಿಂದೆ ಸಿಕ್ಕಿಕೊಂಡಿದ್ದ ನೆಲ್ಲೂರಿನ ಮದನ ಎಂಬ ಯುವಕನನ್ನ ರಕ್ಷಣೆ ಮಾಡಲಾಯಿತು.
ಎರಡು ದಿನಗಳ ಹಿಂದೆ ಮದನ ಸಿಲುಕಿಕೊಂಡರೂ, ಆತ ಇಂದು ಜನರಿಗೆ ಕಂಡು ಬಂದಿದ್ದ.
ಈ ವಿಷಯವನ್ನ ತಿಳಿದ ತಕ್ಷಣವೇ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಕಡದಳ್ಳಿ ತೆರಳಿದ್ರು.
ಅದಕ್ಕಿಂತ ಪೂರ್ವದಲ್ಲಿಯೇ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.
ಬೋಟ್ ಮೂಲಕ ಮದನ ಎಂಬ ಯುವಕನನ್ನ ರಕ್ಷಣೆ ಮಾಡಲಾಯಿತು.
ಯುವಕ ಸಾಕಷ್ಟು ಬಳಲಿದ್ದರಿಂದ, ಅವನನ್ನ ಆಸ್ಪತ್ರೆಗೆ ಕಳಿಸುವ ವ್ಯವಸ್ಥೆಯನ್ನ ಮಾಡಲಾಗಿದೆ.