ರಾಜ್ಯ

ಧಾರವಾಡದ ಕಡದಳ್ಳಿ ಬಳಿ ಬೆಣ್ಣೆಹಳ್ಳದಲ್ಲಿ ಎರಡು ದಿನಗಳ ಹಿಂದೆ ಸಿಕ್ಕಿಕೊಂಡಿದ್ದ ಯುವಕನ ರಕ್ಷಣೆ

ಧಾರವಾಡ prajakiran.com : ನವಲಗುಂದ ತಾಲೂಕಿನ ಕಡದಳ್ಳಿ ಗ್ರಾಮದ ಹೊರವಲಯದಲ್ಲಿರುವ ಬೆಣ್ಣೆಹಳ್ಳದಲ್ಲಿ ಕಳೆದ ಎರಡು ದಿನಗಳ ಹಿಂದೆ ಸಿಕ್ಕಿಕೊಂಡಿದ್ದ ನೆಲ್ಲೂರಿನ ಮದನ ಎಂಬ ಯುವಕನನ್ನ ರಕ್ಷಣೆ ಮಾಡಲಾಯಿತು.

ಎರಡು ದಿನಗಳ ಹಿಂದೆ ಮದನ ಸಿಲುಕಿಕೊಂಡರೂ, ಆತ ಇಂದು ಜನರಿಗೆ ಕಂಡು ಬಂದಿದ್ದ.

ಈ ವಿಷಯವನ್ನ ತಿಳಿದ ತಕ್ಷಣವೇ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಕಡದಳ್ಳಿ ತೆರಳಿದ್ರು.
ಅದಕ್ಕಿಂತ ಪೂರ್ವದಲ್ಲಿಯೇ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.

ಬೋಟ್ ಮೂಲಕ ಮದನ ಎಂಬ ಯುವಕನನ್ನ ರಕ್ಷಣೆ ಮಾಡಲಾಯಿತು.

ಯುವಕ ಸಾಕಷ್ಟು ಬಳಲಿದ್ದರಿಂದ, ಅವನನ್ನ ಆಸ್ಪತ್ರೆಗೆ ಕಳಿಸುವ ವ್ಯವಸ್ಥೆಯನ್ನ ಮಾಡಲಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *