ಧಾರವಾಡ Prajakiran.com : ನಗರದ ಹೆಬ್ಬಳ್ಳಿ ರಸ್ತೆಯಲ್ಲಿರುವ ಲಾಡ ಹಾಗೂ ಯಲಿಗಾರ ಸಮಾಜದ ತುಳಜಾ ಭವಾನಿ ದೇವಸ್ಥಾನದ 11 ನೇ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
ಧಾರವಾಡ ನಗರದ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳದ ಜೋತೆ ಪೂಣ೯ ಕುಂಭದೂಂದಿಗೆ ಸುಮಂಗಲಿಯರು ಭಕ್ತಿ ಭಾವ ಮೆರೆದರು.
ಜಾತ್ರಾ ಮಹೋತ್ಸವ ಹಾಗೂ ವಾರ್ಷಿಕೋತ್ಸವದ ಮುಂದಾಳತ್ವವನ್ನು ದೇವಸ್ಥಾನ ಮಂಡಳಿ ಅಧ್ಯಕ್ಷ ಪ್ರಕಾಶ ಎಲಿಗಾರ, ವಾಸುದೇವ ಎಲಿಗಾರ, ರವಿ ಎಲಿಗಾರ, ಎಮ್ ಎಸ್ ಹೋಳೆಹೂಸೂರ, ಅಶೋಕ ಕೋಟಬಾಗಿ, ವೆಂಕಟೇಶ ಅಸುಂಡಿ ಸೇರಿದಂತೆ ಲಾಡ ಹಾಗೂ ಯಲಿಗಾರ ಸಮಾಜದವರು ವಹಿಸಿದ್ದರು.