ಅಪರಾಧ

ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು: ಭೈರಗೊಂಡ ಮಹಾದೇವ್ ಸಾಹುಕಾರ್ ಗೆ ಮೂರು ಗುಂಡು, ಸ್ಥಳದಲ್ಲಿಯೇ ಮ್ಯಾನೇಜರ್ ಸಾವು 

ವಿಜಯಪುರ prajakiran.com : ಭೀಮಾತೀರದಲ್ಲಿ ಮತ್ತೆ ಸೋಮವಾರ ಗುಂಡಿನ ಸದ್ದು ಮೊಳಗಿದ್ದು,  ಮಹಾದೇವ ಸಾಹುಕಾರ್ ಭೈರಗೊಂಡ ಸಂಚರಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ ಅವರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಮಹಾದೇವ ಭೈರಗೊಂಡ ಅವರ ಸ್ಥಿತಿ ಗಂಭೀರವಾಗಿದೆ. ಅವರ ಹೊಟ್ಟೆ ಭಾಗದಲ್ಲಿ  ಎರಡು ಗುಂಡು ತಗುಲಿದ್ದರೆ, ಇನ್ನೊಂದು ಗುಂಡು ಬೆನ್ನಿನ ಪಕ್ಕೆಲುಬಿಗೆ ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಗುಂಡಿನ ದಾಳಿಗೆ ಭೈರಗೊಂಡ ಮಹಾದೇವ ಸಾಹುಕಾರ್ ಮ್ಯಾನೇಜರ್ ಬಾಬುರಾಮ್ ಮಾರುತಿ […]

ರಾಜ್ಯ

ಕಾಳಜಿ ಇಲ್ಲದ ಕೇಂದ್ರಗಳ ವಿರುದ್ದ ಜನರ ಆಕ್ರೋಶ : ಸರಕಾರದ ಆದೇಶ ಕೇವಲ ಪುಸ್ತಕದ ಬದನೆಕಾಯಿ

ಬೆಂಗಳೂರು prajakiran.com : ಮ್ಯಾಲ ಮಳಿ, ಕೆಳಗ ನೀರು ಏನ್ ಮಾಡೋದು ಎನ್ ಉಣ್ಣೋದು ತಿನ್ನೊದು ಎಂದು ಮಳೆ ಹೊಡೆತಕ್ಕೆ ಎಲ್ಲವೂ ಕಳೆದುಕೊಂಡ ಜನತೆ ಕಣ್ಣೀರು ಹಾಕುತ್ತಿದ್ದಾರೆ. ಉತ್ತರಕರ್ನಾಟಕದ ವಿವಿಧ ಜಿಲ್ಲೆಯಲ್ಲಿ ಸಾವಿರಾರು ರೈತರು, ಬೀದಿಪಾಲಾದ ಕುಟುಂಬಗಳು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದಾರೆ. ಅದರಲ್ಲೂ ಕಾಳಜಿ ಕೇಂದ್ರಗಳಲ್ಲಿ ರಾಜ್ಯ ಸರಕಾರದ ಆದೇಶ ಪುಸ್ತಕದ ಬದನೆಕಾಯಿ ಆಗಿರುವುದು ಬಟಾಬಯಲಾಗಿದೆ.   ಕಲಬುರಗಿ ಜಿಲ್ಲೆಯ ಅಫಜಲಪೂರದ ಕಾಳಜಿ ಕೇಂದ್ರದಲ್ಲಿ ಬಾಣಂತಿಯೊಬ್ಬಳು ಬೆಳಗ್ಗೆ ಉಪಹಾರವಿಲ್ಲದೆ, ಸಂಜೆ 5.30ಕ್ಕೆ ಊಟ ಮಾಡಿದ್ದಾರೆ.   ಅಲ್ಲದೆ,  ಬೆಳಗಿನ […]

ಅಂತಾರಾಷ್ಟ್ರೀಯ

ವಿಜಯಪುರ ಯೋಧ ಜಮ್ಮು ಕಾಶ್ಮೀರದಲ್ಲಿ ಹುತಾತ್ಮ

ಶ್ರೀನಗರ Prajakiran.com : ವಿಜಯಪುರ ಜಿಲ್ಲೆಯ ಬಿಎಸ್ಎಫ್ ಯೋಧ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಅವಘಡಕ್ಕೆ ಸಿಲುಕಿ ಹುತಾತ್ಮರಾಗಿದ್ದಾರೆ. ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ 31 ವರ್ಷದ ಯೋಧ ಶಿವಾನಂದ ಬಡಿಗೇರ ಅವರೇ ಹುತಾತ್ಮರಾದ ಯೋಧರಾಗಿದ್ದಾರೆ. ಈ ಮೊದಲು ಅವರು ಬಾಂಗ್ಲಾ ಗಡಿಯಲ್ಲಿ ಸೇವೆ ಸಲ್ಲಿಸಿ ಆಬಳಿಕ ಜಮ್ಮು ಕಾಶ್ಮೀರಕ್ಕೆ  ನಿಯೋಜನೆಗೊಂಡಿದ್ದರು. ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಯೋಧ ಶಿವಾನಂದ ವಿಧಿವಶರಾಗಿದ್ದಾರೆ ಎಂದು […]