ರಾಜ್ಯ

ಧಾರವಾಡದ ನಿವೃತ್ತ ಪಿ ಎಸ್ ಐ ಕರೋನಾದಿಂದ ಸಾವು

ಧಾರವಾಡ prajakiran.com : ಧಾರವಾಡದ ಉಪನಗರ ಪೊಲೀಸ್ ಠಾಣೆಯ ನಿವೃತ್ತ ಪಿ ಎಸ್ ಐ ಒಬ್ಬರು ಕರೋನಾದಿಂದ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಧಾರವಾಡದ ಹೊಯ್ಸಳ ನಗರ ನಿವಾಸಿಯಾಗಿದ್ದ ರಮೇಶ ಕಾತರಕಿ ಅವರೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕಳೆದ ಹದಿನೈದು ದಿನಗಳಿಂದ ಕೋವಿಡ್ ನಿಂದ ಬಳಲುತ್ತಿದ್ದ ಅವರು ಸೋಮವಾರ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ. ಇವರು ಈ ಹಿಂದೆ ಧಾರವಾಡ ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಆಗಿದ್ದರು. ಸೇವಾ ಹಿರಿತನದ ಆಧಾರದ ಮೇಲೆ ಧಾರವಾಡದ ಉಪನಗರ […]

ಅಪರಾಧ

ಚೀಟರ್ ಮೋನ್ಯಾಗೆ ಸುಪ್ರೀಂಕೋರ್ಟ್ ನಿಂದ ಷರತ್ತುಬದ್ದ ಜಾಮೀನು

ಧಾರವಾಡ prajakiran.com : ಮೋಹನ್ ವಾಳ್ವೆಕರ್ ಅಲಿಯಾಸ್ ಚೀಟರ್ ಮೋನ್ಯಾಗೆ ಸುಪ್ರೀಂಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ತಲಾ ಒಂದು ಲಕ್ಷ ರೂಪಾಯಿ ಬಾಂಡ್ ನ ಇಬ್ಬರು ಜಾಮೀನುದಾರರು, ನ್ಯಾಯಾಲಯಕ್ಕೆ ತಪ್ಪದೆ ಹಾಜರಾಗುವುದು ಹಾಗೂ ಯಾವುದೇ ಸಾಕ್ಷಿದಾರರಿಗೆ ಬೆದರಿಕೆ ಹಾಕುವುದು ಮಾಡದಂತೆ, ಒತ್ತಡ ಹೇರದಂತೆ ಮತ್ತು ಟ್ಯಾಂಪರ್ ಮಾಡದಂತೆ ಸೂಚಿಸಿದೆ. ಜೊತೆಗೆ ಭವಿಷ್ಯದಲ್ಲಿ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗದಂತೆ, ನ್ಯಾಯಾಲಯದ ಪರವಾನಿಗೆ ಇಲ್ಲದೆ ಅದರ ವ್ಯಾಪ್ತಿ ಬಿಟ್ಟು ಹೋಗದಂತೆ ಷರತ್ತು ವಿಧಿಸಿ ಸುಪ್ರೀಂಕೋರ್ಟ್  ಜಾಮೀನು ಮಂಜೂರು […]

ಅಪರಾಧ

ಧಾರವಾಡದಲ್ಲಿ ಅಕ್ರಮ ಗಾಂಜಾ ಮಾರಾಟ : ನಾಲ್ವರ ಬಂಧನ

ಧಾರವಾಡ prajakiran.com : ಧಾರವಾಡದಲ್ಲಿ ಕೂಡ ಸಾಕಷ್ಟು ಪ್ರಮಾಣದ ಅಕ್ರಮ ಗಾಂಜಾ ಘಾಟು ಕೇಳಿ ಬರುತ್ತಿದ್ದು, ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿತರನ್ನು ಬಂಧಿಸುವಲ್ಲಿ ಧಾರವಾಡ ಉಪನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣಪೂರ ಎಲ್.ಐ.ಸಿ ಕ್ವಾಟರ್ಸ ಚಿಕ್ಕಮಕ್ಕಳ ಗಾರ್ಡನ್ ಹತ್ತಿರದ ರಸ್ತೆಯ ಮೇಲೆ ಸೆ. ೧೧ ರಂದು ಯಾರೋ ಎರಡು ವಾಹನಗಳಲ್ಲಿ ಯಾವುದೋ ಮಾದಕ ವಸ್ತು ಮಾರಾಟ ಮಾಡುವ ಉದ್ದೇಶದಿಂದ ನಿಂತುಕೊಂಡಿದ್ದಾಗಿ ತಿಳಿದು ಬಂದಿದೆ. ಖಚಿತ ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸರು ಸರಕಾರ ತರ್ಪಿ ದೂರು […]