ರಾಜ್ಯ

ಕಾಳಜಿ ಇಲ್ಲದ ಕೇಂದ್ರಗಳ ವಿರುದ್ದ ಜನರ ಆಕ್ರೋಶ : ಸರಕಾರದ ಆದೇಶ ಕೇವಲ ಪುಸ್ತಕದ ಬದನೆಕಾಯಿ

ಬೆಂಗಳೂರು prajakiran.com : ಮ್ಯಾಲ ಮಳಿ, ಕೆಳಗ ನೀರು ಏನ್ ಮಾಡೋದು ಎನ್ ಉಣ್ಣೋದು ತಿನ್ನೊದು ಎಂದು ಮಳೆ ಹೊಡೆತಕ್ಕೆ ಎಲ್ಲವೂ ಕಳೆದುಕೊಂಡ ಜನತೆ ಕಣ್ಣೀರು ಹಾಕುತ್ತಿದ್ದಾರೆ. ಉತ್ತರಕರ್ನಾಟಕದ ವಿವಿಧ ಜಿಲ್ಲೆಯಲ್ಲಿ ಸಾವಿರಾರು ರೈತರು, ಬೀದಿಪಾಲಾದ ಕುಟುಂಬಗಳು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದಾರೆ. ಅದರಲ್ಲೂ ಕಾಳಜಿ ಕೇಂದ್ರಗಳಲ್ಲಿ ರಾಜ್ಯ ಸರಕಾರದ ಆದೇಶ ಪುಸ್ತಕದ ಬದನೆಕಾಯಿ ಆಗಿರುವುದು ಬಟಾಬಯಲಾಗಿದೆ.   ಕಲಬುರಗಿ ಜಿಲ್ಲೆಯ ಅಫಜಲಪೂರದ ಕಾಳಜಿ ಕೇಂದ್ರದಲ್ಲಿ ಬಾಣಂತಿಯೊಬ್ಬಳು ಬೆಳಗ್ಗೆ ಉಪಹಾರವಿಲ್ಲದೆ, ಸಂಜೆ 5.30ಕ್ಕೆ ಊಟ ಮಾಡಿದ್ದಾರೆ.   ಅಲ್ಲದೆ,  ಬೆಳಗಿನ […]

ರಾಜ್ಯ

ನಾಡೋಜ ಚೆನ್ನವೀರ ಕಣವಿಗೆ ಕೇಂದ್ರಿಯ ವಿವಿ ಗೌರವ ಡಾಕ್ಟರೇಟ್ ಪ್ರದಾನ

ಧಾರವಾಡ prajakiran.com :  ನಾಡೋಜ ಚೆನ್ನವೀರ ಕಣವಿ ಅವರಿಗೆ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಮ್.ಮಹೇಶ್ವರಯ್ಯಅವರು ವಿಶ್ವವಿದ್ಯಾಲಯದ ೫ನೇ ಘಟಿಕೋತ್ಸವದ ಅಂಗವಾಗಿ ಗೌರವ ಡಾಕ್ಟರೇಟ್ ಪದವಿಯನ್ನು ಸೋಮವಾರ ಸಂಜೆ ನಗರದ ಕಣವಿ ಅವರ ನಿವಾಸದಲ್ಲಿ ಪ್ರದಾನಮಾಡಿದರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಇದುವರೆಗೆ ದೇಶದ ೧೩ ಜನ ಸಾಧಕರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿದೆ. ವಿಶ್ವವಿದ್ಯಾಲಯವು ಈ ಬಾರಿ ನೀಡಿರುವ ೫ ಜನ ಗೌರವ ಡಾಕ್ಟರೇಟ್ ಪುರಸ್ಕೃತರಲ್ಲಿ ಕನ್ನಡಿಗರಿಗೆ ಹೆಚ್ಚು ಮನ್ನಣೆಯನ್ನು ಗೌರವಾನ್ವಿತ ರಾಷ್ಟ್ರಪತಿಗಳು ನೀಡಿರುವುದು […]