ಅಪರಾಧ

ಚನ್ನರಾಯಪಟ್ಟಣದಲ್ಲಿ ವೃದ್ದ ದಂಪತಿಯ ಬರ್ಬರ ಹತ್ಯೆ

ಹಾಸನ prajakiran.com : ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ವೃದ್ದ ದಂಪತಿಯ ಬರ್ಬರ ಹತ್ಯೆ ನಡೆದಿದ್ದು, ಜಿಲ್ಲೆಯ ಜನತೆ ಮತ್ತೆ ಬೆಚ್ಚಿಬಿದ್ದಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ ಆಲಗೊಂಡನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮೃತ ವೃದ್ದ ದಂಪತಿಯನ್ನು ಮುರುಳೀಧರ್ , ಉಮಾದೇವಿ ಎಂದು ಗುರುತಿಸಲಾಗಿದೆ. ಇಬ್ಬರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ವೃದ್ದ ದಂಪತಿಗಳಿಗೆ‌ ಮಕ್ಕಳು ಇರಲಿಲ್ಲ. 80 ಎಕರೆ ಜಮೀನು ಹೊಂದಿದ್ದ ಮುರುಳೀಧರ್ ಹಾಗೂ ಉಮಾದೇವಿ ದಂಪತಿ ಇಬ್ಬರು ತೋಟದ ಮನೆಯಲ್ಲಿ ವಾಸವಿದ್ದರು. ಮುರುಳೀಧರ್ […]

ರಾಜ್ಯ

ಹಾಸನ ಜಿಲ್ಲೆಯಲ್ಲಿಂದು ಹೊಸದಾಗಿ 25 ಕೊವಿಡ್-19 ಪ್ರಕರಣ ಪತ್ತೆ

ಹಾಸನ prajakiran.com : ಜಿಲ್ಲೆಯಲ್ಲಿ ಇಂದು ಹೊಸದಾಗಿ 25 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 740 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ. ಇದುವರೆಗೆ 486 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 232 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ 22 ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದರು. ಹೊಸದಾಗಿ ಇಂದು ಪತ್ತೆಯಾದ 25 ಪ್ರಕರಣಗಳಲ್ಲಿ 20 ಜನ ಹಾಸನ […]

ರಾಜ್ಯ

ಹಾಸನದ ಇಬ್ಬರು ಪತ್ರಕರ್ತರಿಗೆ ವಕ್ಕರಿಸಿದ ಕರೋನಾ ….!

ಹಾಸನ prajakiran.com : ರಾಜ್ಯದಲ್ಲಿ ಕರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕರೋನಾ ಸೇನಾನಿಗಳಾದ ಪೊಲೀಸ್ , ಆರೋಗ್ಯ ಇಲಾಖೆ, ಪತ್ರಕರ್ತರಿಗೂ ಕಾಡುತ್ತಿದೆ. ಹಾಸನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರು ಖಾಸಗಿ ಚಾನೆಲ್ ಗಳ ಪತ್ರಕರ್ತರಿಗೆ ಸೋಂಕು ಇರುವುದು ದೃಢವಾಗಿದೆ. ಅವರು ಐದು ದಿನಗಳ ಹಿಂದೆ ತಪಾಸಣೆ ಮಾಡಿಸಿಕೊಂಡಿದ್ದರು. ಆದರೆ ಬುಧವಾರ ವರದಿ ಬಂದಿದ್ದು, ಅದರಲ್ಲಿ ಪಾಸಿಟಿವ್ ಇರುವುದು ಖಚಿತಗೊಂಡಿದೆ. ಹೀಗಾಗಿ ಇಬ್ಬರನ್ನು ಕೋವಿಡ್ ನಿಯೋಜಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೇ ರೀತಿ ಅವರೊಂದಿಗೆ ಪ್ರಾಥಮಿಕ ಸಂಪರ್ಕ […]

ರಾಜ್ಯ

ಹಾಸನ ಜಿಲ್ಲೆಯಲ್ಲಿ ಪೊಲೀಸ್ ಕಾನ್ಸಟೇಬಲ್ ಮಗಳು, ಮಗ ಸೇರಿ ಕುಟುಂಬದ ಐವರಿಗೆ ಸೋಂಕು

ಹಾಸನ prajakiran.com : ಹಾಸನ ಜಿಲ್ಲೆಯಲ್ಲಿ ಗುರುವಾರ 12 ಜನರಿಗೆ ಕರೋನ ಸೋಂಕು ವ್ಯಾಪಿಸಿದ್ದು, ಸೋಂಕಿತ ಪೊಲೀಸ್ ಕಾನ್ಸಟೇಬಲ್  ಪಿ-9576  ಸಂಪರ್ಕದಿಂದ ಆರು ಜನರಿಗೆ ಕರೊನಾ ವಕ್ಕರಿಸಿದೆ. ಸೋಂಕಿತ ಪೇದೆಯ 3  ವರ್ಷದ ಮಗಳು, 8 ವರ್ಷದ ಮಗ, ಮಡದಿ‌, ಅತ್ತೆ ಹಾಗೂ ಮಾವನಿಗೂ ಕ್ರೂರಿ‌ ಕರೊನಾ ಹರಡಿದೆ. ಆ ಮೂಲಕ ಒಂದೇ ಕುಟುಂಬದ ಐವರಿಗೆ ಸೋಂಕು ಹರಡಿರುವುದು ಗೊತ್ತಾಗಿದೆ.  ಪಿ-9576 ಪ್ರಾಥಮಿಕ ಸಂಪರ್ಕದಿಂದ ಕೆ.ಆರ್.ಪುರಂ ಠಾಣೆಯ ಮತ್ತೋಬ್ಬ ಪೊಲೀಸ್ ಗೆ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ. […]