ಧಾರವಾಡ prajakiran.com : ಧಾರವಾಡ ಎಸಿಪಿ ಅನುಷಾ ಜಿ. ಅವರು ಧಾರವಾಡ ಶಹರ ಪೊಲೀಸ್ ಠಾಣೆಯ ಪೊಲೀಸರ ಸಹಾಯದೊಂದಿಗೆ ಕೋವಿಡ್-೧೯ ವಿಶೇಷ ಜನಾಂದೋಲನ ಅಭಿಯಾನವನ್ನು ಹಮ್ಮಿಕೊಂಡು ಜನರ ಗಮನ ಸೆಳೆದರು. ಧಾರವಾಡದ ಮಾರುಕಟ್ಟೆಗೆ ಬಂದ ಹಳ್ಳಿ ಜನರನ್ನು ಆತ್ಮೀಯತೆಯಿಂದ ಮಾತನಾಡಿಸಿ, ಮಾಸ್ಕ್ ಧರಿಸದೆ ಹೊರಗಡೆ ಸಂಚರಿಸದಂತೆ ಹಾಗೂ ಆರೋಗ್ಯ ಕಾಳಜಿ ವಹಿಸುವಂತೆ ಸಲಹೆ ನೀಡಿದರು. ಅಲ್ಲದೆ, ಅನೇಕ ಹಿರಿಯ ಜೀವಗಳಿಗೆ ಸ್ವತಃ ಮಾಸ್ಕ್ ಹಾಕಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು. ಕರೋನಾ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, […]
Tag: #dharwad market
ಧಾರವಾಡದ ವ್ಯಾಪಾರಸ್ಥರಿಂದಲೂ ಸ್ವಯಂ ಪ್ರೇರಿತ ನಿರ್ಬಂಧ
ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಕರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಧಾರವಾಡದ ವಿವಿಧ ವ್ಯಾಪಾರಸ್ಥರು ಸ್ವಯಂಪ್ರೇರಿತ ನಿರ್ಬಂಧವಿಧಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಧಾರವಾಡದ ಗ್ರಾಹಕ ವಸ್ತುಗಳ ವಿತರಕರ ಸಂಘ, ಕಿರಾಣಿ ವರ್ತಕರ ಸಂಘ, ಜ್ಯುವೆಲರಿ ವರ್ತಕರ ಸಂಘ, ಬಟ್ಟೆ ವ್ಯಾಪಾರಿ ವರ್ತಕರ ಸಂಘ, ಹೋಲ್ ಸೇಲ್ ವ್ಯಾಪಾರಸ್ಥರ ಸಂಘ, ಹೂ ವ್ಯಾಪಾರಸ್ಥರ ಸಂಘ, ಎಲಿ ಅಡಿಕೆ ವರ್ತಕರ ಸಂಘ ಸೇರಿದಂತೆ ಇನ್ನಿತರ ಎಲ್ಲಾ ವ್ಯಾಪಾರಿ ಸಂಘಗಳು ಧಾರವಾಡದಲ್ಲಿ ಕರೋನಾ ನಿಯಂತ್ರಣಕ್ಕೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ […]