ಧಾರವಾಡ prajakiran.com : ಭಾರತೀಯ ಜನತಾ ಪಕ್ಷದ ವಿಪ್ ಉಲ್ಲಂಘಿಸಿದ ಆರೋಪದ ಮೇಲೆ ಧಾರವಾಡ ಜಿಲ್ಲಾ ಪಂಚಾಯತನ ನಾಲ್ವರು ಸದಸ್ಯರನ್ನು ಅನರ್ಹಗೊಳಿಸಿದ ರಾಜ್ಯ ಚುನಾವಣಾ ಆಯೋಗದ ಆದೇಶಕ್ಕೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕಳೆದ ಜೂ. ೧೦ ರಂದು ರಾಜ್ಯ ಚುನಾವಣಾ ಆಯೋಗವು ಬಿಜೆಪಿಯ ಧಾರವಾಡ ಜಿಲ್ಲಾ ಪಂಚಾಯತನ ತಬಕದ ಹೊನ್ನಳ್ಳಿ ಜಿಪಂ ಸದಸ್ಯರಾದ ಮಂಜವ್ವ ಶೇಖಪ್ಪ ಹರಿಜನ, ಗಳಗಿ ಹುಲಕೊಪ್ಪ ಜಿಪಂ ಸದಸ್ಯ ಅಣ್ಣಪ್ಪ ಫಕೀರಪ್ಪ ದೇಸಾಯಿ, ಗುಡಗೇರಿ ಜಿಪಂ ಸದಸ್ಯೆ ಜ್ಯೋತಿ ಶಿವಾನಂದ ಬೆಂತೂರ […]