ಅಪರಾಧ

ಧಾರವಾಡ ಹೊರವಲಯದಲ್ಲಿ ಬೆಳ್ಳಂ ಬೆಳಗ್ಗೆ ಭೀಕರ ರಸ್ತೆ ಅಪಘಾತ : ಸ್ಥಳದಲ್ಲೇ 11 ಜನರ ರ್ದುಮರಣ

ಧಾರವಾಡ prajakiran.com : ಧಾರವಾಡ ಹೊರವಲಯದಲ್ಲಿ ಬೆಳ್ಳಂ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇದರಿಂದಾಗಿ ಘಟನಾ: ಸ್ಥಳದಲ್ಲೇ 11 ಜನರ ರ್ದುಮರಣವನ್ನಿಪ್ಪಿದ್ದಾರೆ. ಧಾರವಾಡದ ಇಟ್ಟಿಗಟ್ಟಿ ಬಳಿ ಈ ಘಟನೆ ನಡೆದಿದ್ದು, ಹಲವರಿಗೆ ಗಂಭೀರವಾದ ಗಾಯಗಳಾಗಿವೆ. ಟೆಂಪೋ ಟ್ರಾವೆಲರ್ ಹಾಗೂ ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಟ್ರಾವೆಲರ್ ನಲ್ಲಿದ್ದ ದಾವಣಗೆರೆ ಜಿಲ್ಲೆಯ ಹಲವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇವರು ದಾವಣಗೆರೆಯಿಂದ ಧಾರವಾಡ  ಮಾರ್ಗವಾಗಿ ಗೋವಾಕ್ಕೆ ಪ್ರಯಾಣಿಸುತ್ತಿದ್ದರು ಎಂದು ಗೊತ್ತಾಗಿದೆ. ಧಾರವಾಡದ ಸಮೀಪ ಬೆಳಗಿನ ಜಾವ […]

ಅಪರಾಧ

ಧಾರವಾಡದ ರಸ್ತೆ ಅಪಘಾತದಲ್ಲಿ ಮಹಿಳೆ ಸಾವು, ಇನ್ನೊಬ್ಬ ಗಂಭೀರ

ಧಾರವಾಡ prajakiran.com : ಟ್ರ್ಯಾಕ್ಟರ್ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ ಶನಿವಾರ ಸಂಜೆ ನಡೆದಿದೆ. ಧಾರವಾಡದ ಹೊಸಯಲ್ಲಾಪುರ ಪ್ರದೇಶದಲ್ಲಿನ ಸುಣ್ಣದ ಭಟ್ಟಿ ಬಳಿ ರ್ದುಘಟನೆ  ಸಂಭವಿಸಿದೆ. ಕಾಯಿಪಲ್ಯೆ ವ್ಯಾಪಾರ ಮಾಡುತ್ತಿದ್ದ ಹಳಿಯಾಳ ಮೂಲದ ಯಲ್ಲವ್ವ ಶಿವಪ್ಪ ದೊಡ್ಡಮನಿ (೪೮) ಎಂಬುವರೇ ಮೃತಪಟ್ಟ ಮಹಿಳೆ ಎಂದು ಗೊತ್ತಾಗಿದೆ. ಬೈಕ್ ಸವಾರ ಜಮೀರ ಮಗದುಮಸಾಬ ಹಂಗರಕಿ ಗಂಭೀರವಾಗಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದುಪೊಲೀಸರು ಪ್ರಜಾಕಿರಣ.ಕಾಮ್ ಗೆ […]

ಅಪರಾಧ

ಧಾರವಾಡದ ಅಮ್ಮಿನಬಾವಿ ಬಳಿ ಅಪಘಾತ : ಇಬ್ಬರು ಯುವಕರು ಸ್ಥಳದಲ್ಲೇ ಸಾವು

ಧಾರವಾಡ prajakiran.com :  ಬೈಕ್ ಹಾಗೂ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಪೀರಗಣಿ ದರ್ಗಾ ಕ್ರಾಸ್ ಬಳಿ ಈ ರ್ದುಘಟನೆ ಸಂಭವಿಸಿದೆ. ಧಾರವಾಡದ ಮದಾರಮಡ್ಡಿಯ  ಮಹಾಂತೇಶ ಮೂಲಿಮನಿ ಹಾಗೂ ಚೇತನ ಮೇಲಿನಮನಿ ಎಂಬುವವರೇ ಈ ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರರಾಗಿದ್ದಾರೆ. ಧಾರವಾಡ ಕಡೆಗೆ ಇವರು ಬೈಕ್ ತೆಗೆದುಕೊಂಡು ಬರುತ್ತಿದ್ದ ವೇಳೆ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ […]