*ವಿನಯ ಕುಲಕರ್ಣಿ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನಿರಾಕರಿಸಿದ ಸುಪ್ರೀಂಕೋರ್ಟ್*
ನವದೆಹಲಿ ಪ್ರಜಾಕಿರಣ.ಕಾಮ್ : ಧಾರವಾಡ ಜಿಲ್ಲೆಯ ಪ್ರವೇಶ ಕೋರಿ ಮಾಜಿ ಸಚಿವ ವಿನಯ ಕುಲಕರ್ಣಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಹೀಗಾಗಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಮತ್ತೆ ತೀವ್ರ ಹಿನ್ನಡೆಯಾದಂತಾಗಿದೆ.
ವಿನಯ ಕುಲಕರ್ಣಿ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ಕೋರಿ ಹಾಗೂ ಷರತ್ತುಬದ್ದ ಜಮೀನಿನಲ್ಲಿ
ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಅರ್ಜಿಯನ್ನು
ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ವಿನಯ್ ಕುಲಕರ್ಣಿ
ಅರ್ಜಿಯ ಕುರಿತು
ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್
ರಾಜಕೀಯ ದುರುದ್ದೇಶದಿಂದ ಅವರನ್ನು ಹತ್ತಿಕ್ಕಲು ಯತ್ನಿಸಲಾಗುತ್ತಿದೆ ಎಂಬ ವಿನಯ್ ಕುಲಕರ್ಣಿ ಪರ ವಕೀಲರ ವಾದಕ್ಕೆ ಸುಪ್ರೀಂಕೋರ್ಟ್ ತಪರಾಕಿ ನೀಡಿದೆ.
ಕೊಲೆಯಂತಹ ಗಂಭೀರ ಸ್ವರೂಪದ ಪ್ರಕರಣದಲ್ಲಿ ಜಾಮೀನು ಮೇಲೆ ಹೊರಗಡೆ ಬಿಟ್ಟಿರೋದು ದೊಡ್ಡ ವಿಚಾರ
ಎಂದು ಸುಪ್ರೀಂಕೋರ್ಟ್ ಗದುರಿದೆ.
ಸಿಬಿಐ ಪರ ಹಿರಿಯ ವಕೀಲರು ಆಗಿರುವ ಕೇಂದ್ರ ಸರ್ಕಾರದ ಅಡಿಸನಲ್ ಸಾಲಿಸಿಟರ್ ಜನರಲ್ ಎಸ್ ವಿ. ರಾಜು ಪ್ರಬಲ ವಾದ ಮಂಡಿಸಿದರು.