ಬೆಂಗಳೂರು ಪ್ರಜಾಕಿರಣ.ಕಾಮ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಂಪುಟ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆಯಾಗಿದ್ದು, ಅವರ ವಿವರಗಳು ಇಂತಿವೆ.
ಸಿದ್ದರಾಮಯ್ಯ ಅವರಿಗೆ ಹಣಕಾಸು, ಗುಪ್ತಚರ, ಐಟಿ, ಬಿಟಿ, ಆಡಳಿತ ಸುಧಾರಣೆ ಹಾಗೂ ಹಂಚಿಕೆ ಆಗದೆ ಉಳಿದ ಖಾತೆ,
ಡಿ.ಕೆ. ಶಿವಕುಮಾರ್ ಅವರಿಗೆ ಬೃಹತ್ ಮತ್ತು ಮಧ್ಯಮ ನೀರಾವರಿ, ಬೆಂಗಳೂರು ನಗರಾಭಿವೃದ್ಧಿ,
ಡಾ. ಜಿ. ಪರಮೇಶ್ವರ ಅವರಿಗೆ ಗೃಹ ಖಾತೆ, ಹೆಚ್.ಕೆ. ಪಾಟೀಲಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಖಾತೆ,
ಕೆ.ಹೆಚ್. ಮುನಿಯಪ್ಪಗೆ ಆಹಾರ ಮತ್ತು ನಾಗರಿಕ ಸರಬರಾಜು, ರಾಮಲಿಂಗಾರೆಡ್ಡಿಗೆ ಸಾರಿಗೆ ಮತ್ತು ಮುಜರಾಯಿ, ಎಂ.ಬಿ. ಪಾಟೀಲ ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ,
ಕೆ.ಜೆ. ಜಾರ್ಜ್ ಗೆ ಇಂಧನ, ದಿನೇಶ್ ಗುಂಡೂರಾವ್ ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಡಾ.ಹೆಚ್. ಸಿ. ಮಹಾದೇವಪ್ಪ ಗೆ ಸಮಾಜ ಕಲ್ಯಾಣ,
ಸತೀಶ ಜಾರಕಿಹೊಳಿಗೆ ಲೋಕೋಪಯೋಗಿ, ಕೃಷ್ಣ ಬೈರೇಗೌಡಗೆ ಕಂದಾಯ, ಪ್ರಿಯಾಂಕಾ ಖರ್ಗೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್,
ಶಿವಾನಂದ ಪಾಟೀಲ ಗೆ ಜವಳಿ, ಸಕ್ಕರೆ, ಜಮೀರ್ ಅಹ್ಮದ್ ಖಾನ್ ಗೆ ವಸತಿ ಹಾಗೂ ವಕ್ತ್ಪ , ಅಲ್ಪಸಂಖ್ಯಾತರ ಕಲ್ಯಾಣ ಖಾತೆ, ಶರಣಬಸ್ಸಪ್ಪ ದರ್ಶನಾಪುರಗೆ ಸಣ್ಣ ಕೈಗಾರಿಕೆ,
ಈಶ್ವರ ಖಂಡ್ರೆಗೆ ಅರಣ್ಯ ಮತ್ತು ಪರಿಸರ ಖಾತೆ, ಎನ್. ಚೆಲುವರಾಯಸ್ವಾಮಿಗೆ ಕೃಷಿ ಖಾತೆ, ಎಸ್.ಎಸ್. ಮಲ್ಲಿಕಾರ್ಜುನ ಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ,
ರಹೀಂ ಖಾನ್ ಗೆ ಪೌರಾಡಳಿತ ಮತ್ತು ಹಜ್ ಖಾತೆ, ಸಂತೋಷ ಲಾಡ್ ಗೆ ಕಾರ್ಮಿಕ ಖಾತೆ,
ಶರಣಪ್ರಕಾಶ್ ಪಾಟೀಲ ಗೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ, ಆರ್. ಬಿ. ತಿಮ್ಮಾಪುರಗೆ ಅಬಕಾರಿ, ಕೆ ವೆಂಕಟೇಶ ಗೆ ಪಶುಸಂಗೋಪನೆ ಮತ್ತು ರೇಷ್ಮೆ ಅಭಿವೃದ್ಧಿ,
ಶಿವರಾಜ್ ತಂಗಡಗಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಖಾತೆ, ಡಿ. ಸುಧಾಕರಗೆ ಯೋಜನೆ ಮತ್ತು ಸ್ಯಾಂಖಿಕ,
ಬಿ. ನಾಗೇಂದ್ರಗೆ ಯುವಜನ ಮತ್ತು ಕ್ರೀಡೆ ಹಾಗೂ ಪರಿಶಿಷ್ಟ ಕಲ್ಯಾಣ, ಕೆ.ಎನ್. ರಾಜಣ್ಣಗೆ ಸಹಕಾರ,
ಬೈರತಿ ಸುರೇಶ್ ಗೆ ನಗರಾಭಿವೃದ್ಧಿ, ಲಕ್ಷ್ಮಿ ಹೆಬ್ಬಾಳಕರ್ ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರು ಮತ್ತು ವಿಶೇಷ ಚೇತನ,
ಮಂಕಾಳು ವೈದ್ಯ ಗೆ ಮೀನುಗಾರಿಕೆ, ಒಳನಾಡು ಸಾರಿಗೆ, ಮಧು ಬಂಗಾರಪ್ಪಗೆ ಪ್ರಾಥಮಿಕ, ಪ್ರೌಢ ಶಿಕ್ಷಣ,
ಡಾ. ಎಂ.ಸಿ
ಸುಧಾಕರ್ ಗೆ ಉನ್ನತ ಶಿಕ್ಷಣ, ಎನ್. ಎಸ್. ಭೋಜರಾಜು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಹಂಚಿಕೆ ಮಾಡಿ ರಾಜ್ಯಪತ್ರ ಹೊರಡಿಸಲಾಗಿದೆ.