siddu tested possitive
ರಾಜ್ಯ

ಯಡಿಯೂರಪ್ಪ ಹೊದ್ರೆ ಮತ್ತೊಬ್ಬ ಭ್ರಷ್ಟ ಮುಖ್ಯಮಂತ್ರಿ ಆಗ್ತಾನೆ ಎಂದ ಸಿದ್ದರಾಮಯ್ಯ…!

ಹುಬ್ಬಳ್ಳಿ prajakiran.com : ರಾಜ್ಯದಲ್ಲಿ ವಿಪರೀತ ಮಳೆಯಾಗಿ ನೆರೆ ಬಂದಿದೆ.

ನೆರೆಹಾನಿ ಸಮೀಕ್ಷೆ ಮಾಡಿ ತಕ್ಷಣವೇ ಪರಿಹಾರ ಘೋಷಣೆ ಮಾಡಬೇಕು ಎಂದು ವಿರೋಧ ನಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನೆರೆಯಿಂದ ಇದುವರೆಗೆ 9 ಜನರ ಜೀವ ಹಾನಿಯಾಗಿದೆ.

ಸಾವಿರಾರು ಮನೆಗಳು ಕುಸಿದು ಬಿದ್ದಿವೆ, ಬೆಳಹಾನಿಯಾಗಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ‌ ನೆರವಿಗೆ ಧಾವಿಸಬೇಕು.

ಸಿಎಮ್ ಉಳಿಸಿಕೊಳ್ಳುವುದು, ಬದಲಾವಣೆ ಮಾಡುವುದರಲ್ಲಿ ಬ್ಯೂಸಿ ಆಗಿದ್ದಾರೆ.
ಕಳೆದ ಬಾರಿಯ ನೆರೆ ಹಾನಿ ಪರಿಹಾರ ಇನ್ನೂ ಕೊಟ್ಟಿಲ್ಲ.‌ ಕನಿಷ್ಠ ಈ ಬಾರಿಯಾದ್ರು ಪರಿಹಾರ ನೀಡಲಿ ಎಂದರುಪಿ ಭ್ರಷ್ಟ ಪಕ್ಷ, ಭ್ರಷ್ಟರರನ್ನ ರಕ್ಷಿಸುವ ಕೆಲಸ ಬಿಜೆಪಿ‌ ಮಾಡುತ್ತಿದೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ.

ಯಡಿಯೂರಪ್ಪ ಹೊದ್ರೆ ಮತ್ತೊಬ್ಬ ಭ್ರಷ್ಟ ಮುಖ್ಯಮಂತ್ರಿ ಆಗ್ತಾನೆ. ಸಿಎಂ ಬದಲಾವಣೆ ಆದ್ರೆ ರಾಜ್ಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.

ಬಿಜೆಪಿಯೇ ರಾಜ್ಯ ಬಿಟ್ಟು‌ ತೊಲಗಬೇಕು. ಬಿಜೆಪಿಯಿಂದ ರಾಜ್ಯದ ಹಿತ ಕಾಪಾಡಲು ಸಾಧ್ಯವಿಲ್ಲ ಎಂದರು.

ಬಿಎಸ್ ಯಡಿಯೂರಪ್ಪ ಅಧಿಕಾರದ ಬಗ್ಗೆ
ಜೆಪಿ ನಡ್ಡಾ ಮೆಚ್ಚುಗೆ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಹೆತ್ತವರಿಗೆ ಹೆಗ್ಗಣ ಮುದ್ದೆ, ಜೆಪಿ ನಡ್ಡಾ ಅವರಿಂದ ಇದನ್ನು ಬಿಟ್ಟು ಏನನ್ನು ನಿರೀಕ್ಷಿಸಲು ಸಾಧ್ಯ ಎಂದರು.

ಯಡಿಯೂರಪ್ಪ ಪರ ಸ್ವಾಮೀಜಿಗಳ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಠಾಧೀಶರು ಧರ್ಮ ಪ್ರವಚನ ಮಾಡಲಿ, ಮಾರ್ಗದಶನ ಮಾಡಲಿ.

ಜನರು ಜನಪ್ರತಿನಿಧಿಗಳನ್ನು ಆಯ್ಕೆ ಮಾಡ್ತಾರೆ, ಜನಪ್ರತಿನಿಧಿಗಳು ಸಿಎಂ ಆಯ್ಕೆ ಮಾಡ್ತಾರೆ ಎಂದು ಸ್ವಾಮೀಜಿಗಳಿಗೆ ಕಿವಿ ಮಾತು ಹೇಳಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *