ಧಾರವಾಡ prajakiran.com :
ಬರುವ ಶನಿವಾರ ಮತ್ತು ಭಾನುವಾರದಂದು ಧಾರವಾಡ ಜಿಲ್ಲೆಯಲ್ಲಿ ಸಂಪುರ್ಣವಾಗಿ ಲಾಕಡೌನ್ ಜಾರಿಯಾಗಲಿದೆ.
ಅಂದು ಎರಡು ದಿನವೂ ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಮಾತ್ರ ಹಾಲು, ಹಣ್ಣು, ತರಕಾರಿ ಖರೀದಿಸಲು ಮಾತ್ರ ಅವಕಾಶವಿದೆ.
ಉಳಿದಂತೆ ಕಿರಾಣಿ, ಕೈಗಾರಿಕೆ ಸೇರಿದಂತೆ ಎಲ್ಲವೂ ಸಂಪೂರ್ಣ ಬಂದ್ ಆಗಲಿವೆ.
ಅಗತ್ಯ ಆರೋಗ್ಯ ಸೇವೆ ಹಾಗೂ ಔಷಧಿ ಅಂಗಡಿಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಈ ಕುರಿತು ಸಂಪೂರ್ಣ ವಿವರವಿರುವ ಆದೇಶವನ್ನು ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ನಿತೇಶ ಪಾಟೀಲ
ಹೊರಡಿಸಿದ್ದಾರೆ.