ಧಾರವಾಡ prajakiran.com : ಸಾಯಂಕಾಲ ಸುರಿದ ಮಳೆ ಅಬ್ಬರಕ್ಕೆ ಧಾರವಾಡದ ಹಲವಡೆ ಮರಗಳು, ವಿದ್ಯುತ್ ಕಂಬ ಧರೆಗೆ ಉರುಳಿವೆ.
ಧಾರವಾಡದ ಎತ್ತಿನಗುಡ್ಡ, ಜಿಪಂ ಕಚೇರಿ ಎದುರು ಮರಗಳು ರಸ್ತೆಯಲ್ಲಿ ಬಿದ್ದಿದ್ದರಿಂದ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ಧಾರವಾಡದ ಟೋಲ್ ನಾಕಾ ರಸ್ತೆಯಲ್ಲಿ ತೇಲಿ ಹೊರಟಿದ್ದ ದ್ವಿಚಕ್ರ ವಾಹನಗಳನ್ನು ಹೊರತೆಗೆಯಲು ಹರಸಾಹಸ ನಡೆಸಬೇಕಾದ ಪ್ರಸಂಗ ಎದುರಾಗಿತ್ತು.
ನೀರು ತುಂಬಿದ ರಸ್ತೆಯಲ್ಲೆ ಇಳಿದು ದ್ವಿಚಕ್ರ ವಾಹನ ತೆಗೆದುಕೊಂಡು ಬಂದ ಸವಾರರು ಬಿ ಆರ್ ಟಿ ಎಸ್ ವಿರುದ್ಧ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ದ ಹಿಡಿಶಾಪ ಹಾಕಿದರು.
ಧಾರವಾಡದ ಟೂಲ್ ನಾಕಾವು ಒಂದು ಗಂಟೆ ಕಾಲ ಸುರಿದಿದ್ದ ಮಳೆಯಿಂದಾಗಿ ಅಕ್ಷರಶಃ ನಲುಗಿ ಹೋಗಿತ್ತು.
ಮಳೆ ಅಬ್ಬರಕ್ಕೆ ಏಕಾಏಕಿ ತುಂಬಿದ ರಸ್ತೆ ಜಲಾವೃತದಂತೆ ಕಾಣುತ್ತಿತ್ತು.
ಬಿಆರ್ಟಿಎಸ್ ಅವೈಜ್ಞಾನಿಕ ಯೋಜನೆಯಿಂದ ರಸ್ತೆ ಜಲಾವೃತಗೊಂಡಿದೆ ಎಂದು ಸ್ಥಳೀಯ ಜನತೆ ಕಿಡಿಕಾರಿದರು.