ಧಾರವಾಡ ಪ್ರಜಾಕಿರಣ.ಕಾಮ್ :ಹುಬ್ಬಳ್ಳಿ-ಧಾರವಾಡ ಅವಳಿನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಎ ಎಸ್ ಐ ಆಗಿ ಆನಂತರ ಪಿ ಎಸ್ ಐ ಬಡ್ತಿ ಪಡೆದಿದ್ದ ಪಿಎಸ್ಐ ಹಾಜಪ್ಪ ಕಬಾಡೆ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
ಧಾರವಾಡದ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದರು.
ಅವರು ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಿಂದ ಪದನ್ನೋತಿ ಹೊಂದಿ ಬೆಂಡಿಗೇರಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.
ಹಾಜಪ್ಪ ಕಬಾಡೆ ಅವರ ಪಾರ್ಥಿವ ಶರೀರವನ್ನ ಕೆಲಕಾಲ ಆಸ್ಪತ್ರೆಯಲ್ಲಿಟ್ಟು ನಂತರ ಅವರ ಹುಟ್ಟೂರಾದ ವಿಜಯಪುರಕ್ಕೆ ತೆಗೆದುಕೊಂಡು ಹೋಗಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಅವಳಿ ನಗರ ಪೊಲೀಸ್ ಆಯುಕ್ತ ಸಂತೋಷ ಬಾಬು ಹಾಗೂ ಹಿರಿಯ ಅಧಿಕಾರಿಗಳು ಅವರು ಕಬಾಡೆ ಅವರ ಪ್ರಾರ್ಥಿವ ಶರೀರದ ದರ್ಶನ ಪಡೆದು ಅಂತಿಮನಮನ ಸಲ್ಲಿಸಿದರು.