ನವದೆಹಲಿ prajakiran.com : ನಿಸರ್ಗ ಚಂಡಮಾರುತಕ್ಕೆ ಗುಜರಾತ್, ಮಹಾರಾಷ್ಟ್ರ ನಲುಗಿ ಹೋಗಿದ್ದು, ಹತ್ತು ಹಲವು ಮನೆಗಳ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿದ್ದು, ಮಹಾರಾಷ್ಟ್ರದಲ್ಲಿ ಒಬ್ಬ ಬಲಿಯಾಗಿದ್ದಾನೆ.
ಉತ್ತರಕರ್ನಾಟಕ ಭಾಗಕ್ಕೆ ಇದರ ಸ್ಪರ್ಶವಾಗಿದ್ದು, ಉತ್ತರಕನ್ನಡ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯಲ್ಲೂ ಹಾದು ಹೋಗಿದೆ.
ವಾಯು ಭಾರ ಕುಸಿತದಿಂದ ಬೆಳಗ್ಗೆಯಿಂದಲೇ ಎರಡು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಳಿಸಿದೆ.
ಆದರೆ ಈ ವರ್ಷದ ಮೋದಲ ಪ್ರಕೃತಿ ವಿಕೋಪದಿಂದ ಉತ್ತರ ಕರ್ನಾಟಕ ತಪ್ಪಿಸಿಕೊಂಡಿದೆ ಎಂದು ಹವಾಮಾನ ತಜ್ಞ ಆರ್ ಎಚ್ ಪಾಟೀಲ್ ಮಾಹಿತಿ ನೀಡಿದರು.
ಧಾರವಾಡ ನಗರದಾದ್ಯಂತ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದ್ದು, ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಆಗಾಗ ಹೂರಪು ಕೊಟ್ಟು ಮಳೆ ಸುರಿಯುತ್ತಿದೆ.
ಸಂಪೂರ್ಣ ಮೋಡ ಕವಿದ ವಾತಾವರಣವೇ ಇದ್ದು, ಸೂರ್ಯ ಬಿಡುವು ಪಡೆದುಕೊಂಡಿದ್ದಾನೆ. ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ನಡೆಯದೇ ಇರುವುದರಿಂದ ರೈತರು ಹೊಲದಿಂದ ಮನೆಗಳಿಗೆ ಮರಳುತ್ತಿದ್ದಾರೆ.
ಇದಕ್ಕೆ ಸೈಕ್ಲೋನ್ ಕಾರಣ. ಇದರಿಂದ ರೈತರಿಗೆ ಅನುಕೂಲ ಹೆಚ್ಚು ಅಭಿಪ್ರಾಯ ಪಟ್ಟಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಸೈಕ್ಲೋನ್ ಎಫೇಕ್ಟ ಅಷ್ಟು ದೊಡ್ಡ ಹಾನಿ ಮಾಡಿಲ್ಲ.
ಆದರೆ ಮಹಾರಾಷ್ಟ್ರ ರಾಜ್ಯಕ್ಕೆ ಬಹಳ ಹಾನಿ ಉಂಟು ಮಾಡಿದೆ ಎಂದ ಅವರು ಜೂನ್ ಜುಲೈ ತಿಂಗಳಲ್ಲಿ ಮಳೆಯು ಕೃಷಿಗೆ ಅನುಕೂಲ ಮಾಡಿಕೊಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿಸರ್ಗ ಸೈಕ್ಲೋನ್ ನಿಂದ ಕರ್ನಾಟಕ ಸೇಫ್ ಆಗಿರುವುದು ಸಮಾಧಾನದ ಸಂಗತಿಯಾಗಿದೆ.
ಅದರಲ್ಲೂ ಹವಾಮಾನ ತಜ್ಞ ಆರ್ ಎಚ್ ಪಾಟೀಲ್ ಹೇಳಿದ ಹಾಗೆ ಕೃಷಿ ಚಟುವಟಿಕೆ ಮಳೆಯಿಂದ ಅನುಕೂಲವಾದರೆ ರೈತರ ಕಷ್ಟ ಕಳೆಯುತ್ತದೆ. ರೈತರಿಗೆ ಅನುಕೂಲ ಆಗುವಂತೆ ಮಳೆಯಾಗಲಿ ಎಲ್ಲದಕ್ಕೂ ಪರಿಹಾರ ಸಿಗಲಿ ಎಂಬುದು ನಮ್ಮ ಹಾರೈಕೆ.