ಚಿಕ್ಕಮಗಳೂರು prajakiran.com : ಹುಬ್ಬಳ್ಳಿ ಘಟನೆ ಪೂರ್ವಯೋಜಿತ ದಾಳಿಯಾಗಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆರೋಪಿಸಿದ್ದಾರೆ.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದರ ಹಿಂದೆ ಹುಬ್ಬಳ್ಳಿ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಎಐಎಂ ಪಾಲಿಕೆ ಸದಸ್ಯರ ಕುಮ್ಮಕ್ಕು ಇದೆ ಎಂದು ದೂರಿದರು.
ಪೊಲೀಸರಿಗೆ ಅವರ ಕೆಲಸ ಮಾಡಲು ಬಿಡಿ. ಹಿಂದುಗಳ ಮನೆ ಹೊಕ್ಕಿ ಬಂಧಿಸಿದಾಗ ಅಮಾಯಕರಲ್ಲ. ಆದರೆ ಮುಸ್ಲಿಂ ಪುಂಡರನ್ನು ಬಂಧಿಸಿದರೆ ಅಮಾಯಕರು ಎಂದು ಹೇಳುವ ಕಾಂಗ್ರೆಸ್ ನಾಯಕ ವಿರುದ್ದ ಮುತಾಲಿಕ್ ಕಿಡಿಕಾರಿದರು.
ದೇವಾಲಯ, ಆಸ್ಪತ್ರೆ ಹಾಗೂ ಪೊಲೀಸರ ಮೇಲೆ ಉದ್ದೇಶ ಪೂರ್ವಕವಾಗಿ ದಾಳಿ ನಡೆಸಿ, ಕಲ್ಲು ತೂರಾಟ ಮಾಡಿ, ಪೊಲೀಸ್ ವಾಹನ ಜಖಂ ಮಾಡಿದವರು ಅಮಾಯಕರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.