ಧಾರವಾಡ prajakiran.com : ನಗರದ ಟಿಕಾರೆ ರಸ್ತೆಯಲ್ಲಿ ಇರುವ ಬ್ರೈಟ್ ಮೋಬೈಲ್ ಹಾಗೂ ಎಲೇಕ್ಟ್ರಾನಿಕ್ ಸೇಂಟರ್ ನಲ್ಲಿ ಕಳ್ಳರು ಕನ್ನ ಹಾಕಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಮೋಬೈಲ್ ಹಾಗೂ ಬೆಲೆ ಬಾಳುವ ಎಲೇಕ್ಟ್ರಾನಿಕ್ ವಸ್ತುಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ಇದರಿಂದಾಗಿ ಮೊಬೈಲ್ ಅಂಗಡಿ ಮಾಲೀಕರು ಕಂಗಾಲಾಗಿದ್ದು, ದಿಕ್ಜೆ ತೋಚದಂತಾಗಿದೆ. ಮೊದಲೇ ಅಂಗಡಿ ಬಂದ್ ಇದ್ದವು. ಅಂತದರಲ್ಲಿ ಇಂತಹ ಘಟನೆ ನಡೆದರೆ ಜೀವನ ಸಾಗಿಸುವುದು ಹೇಗೆ ಎಂಬ ಪ್ರಶ್ನೆ ಮೊಬೈಲ್ ಅಂಗಡಿ ಮಾಲೀಕರದ್ದು
ಘಟನಾ ಸ್ಥಳಕ್ಕೆ ಧಾರವಾಡ ಶಹರ ಪೊಲೀಸ್ ಠಾಣೆ ಪೋಲಿಸರು ಹಾಗೂ ಶ್ವಾನ ದಳದ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ.
ಈ ಕುರಿತು ಧಾರವಾಡ ಶಹರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೋಲಿಸರು ಜಾಲ ಬೀಸಿದ್ದಾರೆ.