ಧಾರವಾಡ ಜಿಲ್ಲಾಡಳಿತದಿಂದ ನಿಷೇಧವಿದ್ದರೂ ಮದುವೆಗೆ ಮುಂದಾದ ಪೋಷಕರು
ಧಾರವಾಡ prajakiran.com :
ಮದುವೆ ದಿಬ್ಬಣಕ್ಕೆ ಹೊರಟಿದ್ದ ಗೂಡ್ಸ್ ವಾಹನವನ್ನು ಧಾರವಾಡದ ವಿದ್ಯಾಗಿರಿ ಪೊಲೀಸರು ವಶಕ್ಕೆ ಪಡೆದ ಘಟನೆ ಶುಕ್ರವಾರ ನಡೆದಿದೆ.
ಜಿಲ್ಲೆಯಲ್ಲಿ ಮದುವೆಗೆ ಜಿಲ್ಲಾಡಳಿತ
ನಿಷೇಧ ಹೇರಿದ್ದರೂ ಹದಿನೈದಕ್ಕೂ ಹೆಚ್ಚು ಜನ ಗೂಡ್ಸ್ ವಾಹನದಲ್ಲಿ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಆಗಮಿಸಿದ್ದರು.
ಧಾರವಾಡದ ಟೋಲ್ ನಾಕಾ ಬಳಿ ಅನುಮಾನದ ಮೇಲೆ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ತಕ್ಷಣ ಧಾರವಾಡದ
ವಿದ್ಯಾಗಿರಿ ಠಾಣೆ ಪೊಲೀಸರು ವಾಹನ ವಶಕ್ಕೆ ತೆಗೆದುಕೊಂಡು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.