ಬೆಳಗಾವಿ prajakiran.com : ನಾನೇ ಅಧಿಕಾರಕ್ಕೆ ತಂದ ಸರಕಾರ. ನಾನೇಕೆ ಮಂತ್ರಿ ಸ್ಥಾನ ಕೇಳಲಿ. ಆದರೆ ನನಗೆ ಕೆಲವರಿಂದ ನೋವಾಗಿದೆ. ಹೀಗಾಗಿ ನಾನು ಮುಂಬೈಗೆ ಹೋಗಿದ್ದು ನಿಜ.ಅಲ್ಲದೆ ರಾಜೀನಾಮೆ ಕೊಡೋದು ನಿಜ ಎಂದು ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಆದರೆ ಯಾವಾಗ ಎಂಬುದು ಈಗಲೇ ಹೇಳಲ್ಲ. ಅದನ್ನು ಅಲ್ಲಿಗೆ ಹೋಗಿ ನಿರ್ಧರಿಸುತ್ತೇನೆ.
ಕೆಲ ಹಿರಿಯರ ಸಲಹೆ ಮೇರೆಗೆ 7-8 ದಿನಗಳ ಕಾಲ ಕಾದು ನೋಡಿ ಆ ಬಳಿಕ ಮುಂದಿನ ಹೆಜ್ಜೆ ಇರಿಸಲಾಗುವುದು ಎಂದು ಮಾಜಿ ಸಚಿವ ಹಾಗೂ ಗೋಕಾಕ್ ಹಾಲಿ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಅಲ್ಲದೆ, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ನನ್ನ ಗಾಢ್ ಪಾಧರ್. ಅವರ ಜೊತೆಗೆ ಚರ್ಚಿಸುತ್ತೇನೆ ಎಂದು ಹೇಳಿದರು.
ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಬಿಜೆಪಿಯ ಜೊತೆಗೆ ಇರುತ್ತೇನೆ. ನಾನೇ ಅಧಿಕಾರಕ್ಕೆ ತಂದ ಸರಕಾರದ ಬೆನ್ನಿಗೆ ಚುರಿ ಹಾಕಲ್ಲ ಎಂದು ಸ್ಪಷ್ಟನೆ ನೀಡಿದರು.
ಆ ಮೂಲಕ ಇವರ ಈ ಹೇಳಿಕೆ
ರಾಜ್ಯ ರಾಜಕೀಯದಲ್ಲಿ ಮತ್ತೆ ಮಿಂಚಿನ ಸಂಚಲನ ಮೂಡಿಸಿದೆ.
ಶುಕ್ರವಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೈಸೂರು ಜಿಲ್ಲೆಯ ಸುತ್ತೂರು ಮಠಕ್ಕೆ ತೆರಳಿ ಡಾ. ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ವೇಳೆ ಮಾತನಾಡಿದ ಅವರು,
ಇಲ್ಲಿಗೆ ಬಂದ್ದಿದ್ದು ರಾಜಕೀಯವಲ್ಲ.
ಸುತ್ತೂರು ಶ್ರೀಗಳ ತಾಯಿಯವರ ಸಾವಿನ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿದ್ದೇನೆ ಎಂದರು.
ಮುಂಬೈನಲ್ಲಿಯೇ ರಾಜೀನಾಮೆ ಬಗ್ಗೆ ಚರ್ಚಿಸುತ್ತೇನೆ. ಈಗಲೇ ಏನೂ ಹೇಳಲ್ಲ, ಮುಂಬೈಗೆ ಹೋಗಿ ಈ ಬಗ್ಗೆ ಮಾತನಾಡುತ್ತೇನೆ ಎಂದರು.
ಗೋಕಾಕ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ನಡೆ ಯಾವ ಕಡೆ ಎಂಬುದು ಸ್ವತಃ ಬಿಜೆಪಿ ನಾಯಕರಿಗೆ ಟೆನ್ಸನ್ ಶುರುವಾಗಿರುವುದು ಸುಳ್ಳಲ್ಲ.