*ಧಾರವಾಡದ ಸಂತೋಷ ಆನಿಶೆಟ್ಟರ್ ಮನೆ ಮೇಲೆ ಲೋಕಾಯುಕ್ತ ದಾಳಿ*
*ದಾಳಿ ವೇಳೆ ಸಿಕ್ಕ ಅರಣ್ಯ ಹಾಗೂ ಆ್ಯಂಟಿಕ್ ಪಿಸ್ ಕಂಡು ಅಚ್ಚರಿ*
*ಬೆಳ್ಳಂ ಬೆಳಗ್ಗೆ ಹಲವು ಕಡೆ ಏಕಕಾಲಕ್ಕೆ ರೇಡ್*
ಧಾರವಾಡ ಪ್ರಜಾಕಿರಣ.ಕಾಮ್ :
ಧಾರವಾಡದಲ್ಲಿಯೂ ಗುರುವಾರ ಬೆಳ್ಳಂ ಬೆಳಗ್ಗೆ ಹಲವು ಕಡೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಬೆಳಗಾವಿ ಮಹಾನಗರ ಪಾಲಿಕೆ ಸಹಾಯಕ ಆಯುಕ್ತರಾಗಿರುವ
ಸಂತೋಷ ಆನಿಶೆಟ್ಟರ್ ಅವರ ಮಿಚಿಗನ್ ಕಾಂಪೌಂಡ್ ನಲ್ಲಿರುವ
ಮನೆ ಮೇಲೆ ದಾಳಿ ಈ ನಡೆದಿದೆ.
ದಾಳಿ ವೇಳೆ ಮನೆಯಲ್ಲಿ ಸಿಕ್ಕ ಬಲು ಅಪರೂಪದ ಅರಣ್ಯ ಹಾಗೂ ಆ್ಯಂಟಿಕ್ ಪೀಸ್ ಗಳನ್ನು ಕಂಡು ಕೆಲಕಾಲ ಲೋಕಾಯುಕ್ತ ಅಧಿಕಾರಿಗಳು ಹೌಹಾರಿದ್ದರು.
ಇದೇ ವೇಳೆ ಧಾರವಾಡದಲ್ಲಿರುವ ಸಂತೋಷ ಮನೆ ಸೇರಿದಂತೆ ಐದು ಕಡೆ ಲೋಕಾ ದಾಳಿ ನಡೆದಿದೆ.
ಧಾರವಾಡದ ಬಿಜಿಎಸ್ ಶಾಲೆ ಬಳಿ ಇರುವ ಸಂತೋಷ್ ಅನಿಶೆಟ್ಟರ ಸಹೋದರನ ಮನೆ, ವೆಂಕಟಾಪೂರ ಬಳಿ ಇರುವ ಬಂಗಲೆ, ಸೇರಿದಂತೆ ಐದು ಕಡೆ 15 ಅಧಿಕಾರಿಗಳಿಂದ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಬ್ಬಿ , ಡಿ ಎಸ್ ಪಿ ಎಸ್ ಎಂ ರಾಗಿ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ
ವಿವಿಧಡೆ ಸೇರಿ ಕೋಟ್ಯಾಂತರ ರೂಪಾಯಿ ಗೂ ಅಧಿಕ ಮೌಲ್ಯದ ಆಸ್ತಿ ಮಾಡಿರುವ ಮಾಹಿತಿ ಲಭ್ಯವಾಗಿದೆ.
ಸದ್ಯ ಮನೆಯ ವಿಡಿಯೋ ಚಿತ್ರಿಕರಣ ಮಾಡಿಸಿದ ಲೋಕಾ ಪೋಲಿಸರು
ಅವುಗಳ ಮೌಲ್ಯ ಮಾಡಿಸಲು ಲೋಕಾಯುಕ್ತರು
ಅರಣ್ಯ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳನ್ನು ಕರೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮನೆಯಲ್ಲಿ ಬೆಳಗ್ಗೆ ಯಿಂದ ಹತ್ತು ಹಲವು ಮಹತ್ತರ ದಾಖಲೆಗಳ ಪರಿಶೀಲನೆ ಆರಂಭಿಸಲಾಗಿದೆ.
ಈ ಮೊದಲು ಸಂತೋಷ ಅನಿಶೆಟ್ಟರ್ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ನಂಬರ್ ಒಂದರಲ್ಲಿ ಸಹಾಯಕ ಆಯುಕ್ತರಾಗಿದ್ದರು.
ಕೆಲವು ವರ್ಷಗಳ ಹಿಂದೆಯಷ್ಟೇ ಬೆಳಗಾವಿಗೆ ವರ್ಗವಾಗಿದ್ದರು.