*ಸರ್ಕಾರ ಬೀಳಿಸಲಿ ಬಿಡಿ… ಖಾರವಾಗಿ ಪ್ರತಿಕ್ರಿಯಿಸಿದ ಸಚಿವ ಸಂತೋಷ ಲಾಡ*
ಧಾರವಾಡ ಪ್ರಜಾಕಿರಣ.ಕಾಮ್ : ಸರ್ಕಾರ ಬಿಳಿಸಿದ್ರೇ… ಬೀಳಿಸಲಿ ಬಿಡಿ… ಪದೇ ಪದೇ ಸರ್ಕಾರ ಕೆಡವಲು ಬಿಜೆಪಿ ಕೈ ಹಾಕ್ತಿದೆ ಎಂದು ಸಚಿವ ಸಂತೋಷ ಲಾಡ ಖಾರವಾಗಿ ಪ್ರತಿಕ್ರಿಯಿಸಿದರು.
ನಗರದಲ್ಲಿ ಮಾದ್ಯಮದವರ ಜೋತೆ ಮಾತನಾಡಿದ ಅವರು, ರಾಜ್ಯದಲ್ಲಿ ಸುಭದ್ರ ಸರಕಾರ ಅಧಿಕಾರಕ್ಕೆ ಬಂದಿದೆ. ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಬೀಳುತ್ತದೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರ ಅವರನ್ನೇ ಕೇಳಿ ಎಂದರು.
ಬಿಜೆಪಿಯವರಿಗೆ ಅಭಿವೃದ್ಧಿ ಬಗ್ಗೆ ಮಾತನಾಡಲು ಹೇಳಿ… ಬಿಜೆಪಿಗೆ ಅಧಿಕಾರ ಹಾಗೂ ಚುನಾವಣೆ ಬಿಟ್ಟು ಮಾತನಾಡಲು ಏನು ಇಲ್ವಾ. ಸರ್ಕಾರ ಬಂದು ನೂರು ದಿನ ಆಯ್ತು,
ಎಲ್ಲರೂ ಬಂದು ಸರ್ಕಾರ ಬೀಳಸ್ತಿವಿ ಎಂದು ಹೇಳಿದರೇ ಅವರಿಗೆ ಏನು ಹೇಳಬೇಕು ಅದೇನು ಚೌಚೌವಾ ಸರ್ಕಾರ ಬೀಳಿಸುವುದು ಎಂದು ಪ್ರಶ್ನಿಸಿದ್ದರು.
ದಲಿತ ಸಿಎಂ ಕೂಗು ಇರುವುದು ನಿಜ ಈ ಕುರಿತು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಎಲ್ಲರೂ ಅಂದಾಜಿನಲ್ಲಿ ಮಾತನಾಡುವುದು ಸರಿಯಲ್ಲ ಎಂದು ಹೇಳಿಕೆ ನೀಡಿದ್ದರು.