ನೂತನ ಕುಲಸಚಿವರ ನೇಮಿಸಿ ಆದೇಶ, ಅಧಿಕಾರ ಸ್ವೀಕರಿಸಿದ ಕುಲಸಚಿವರು
ಧಾರವಾಡ prajakiran.com : ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ರವೀಂದ್ರನಾಥ್ ಕದಂ ಅವರನ್ನು ರಾಜ್ಯದ ಬಿಜೆಪಿ ಸರಕಾರ ದಿಢೀರ್ ಎತ್ತಂಗಡಿ ಮಾಡಿದೆ.
ಅವರ ಸ್ಥಾನಕ್ಕೆ ಮೈಸೂರು ವಿಶ್ವವಿದ್ಯಾಲಯದ ಭೂಗೋಳ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ನಾಗರಾಜ್ ಹೆಚ್. ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.
ಅದರ ಬೆನ್ನಲ್ಲೇ ನೂತನ ಮೌಲ್ಯ ಮಾಪನ ಕುಲಸಚಿವ ನಾಗರಾಜ ಹೆಚ್. ಅಧಿಕಾರ ಸ್ವೀಕರಿಸಿದರು.
ಹಿಂದಿನ ಕುಲಸಚಿವರ ಮೇಲೆ ಸಂಶೋಧನಾ ವಿದ್ಯಾರ್ಥಿಗಳು ಹಲವು ಆರೋಪ ಮಾಡಿ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರು.
ಅದರ ಬೆನ್ನ ಹಿಂದೆಯೇ ಸಂಶೋಧನಾ ವಿದ್ಯಾರ್ಥಿಗಳು ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ.
ಹೀಗಾಗಿ ಅವರ ಸಂಶೋಧನೆ ಕಾರ್ಯ ಸ್ಥಗಿತಗೊಳಿಸಿ, ಅವರು ನನ್ನ ಮೇಲೆ ಅನಗತ್ಯವಾಗಿ ದೂರಿ ಪತ್ರ ಬರೆದಿದ್ದಾರೆ. ಇದು ಸರಿಯಲ್ಲ ಎಂದು ಕುಲಪತಿಗಳಿಗೆ ಪತ್ರ ಬರೆದು ಗಮನ ಸೆಳೆದಿದ್ದರು.
ರಾಜ್ಯ ಸರ್ಕಾರಕ್ಕೆ ಹಲವು ಪತ್ರ ಬಂದ ಹಿನ್ನೆಲೆಯಲ್ಲಿ ಮುಜುಗರ ಉಂಟು ಮಾಡಿತ್ತು. ಅದರೆ, ಅವವಸ್ಥೆ ಸರಿಪಡಿಸಬೇಕಾದ ಸರಕಾರ ಹುದ್ದೆಗೆ ಸರ್ಜರಿ ಮಾಡಿ ಕೈ ತೊಳೆದುಕೊಂಡಿದೆ.