ರಾಜ್ಯ

ಧಾರವಾಡದ ಕವಿವಿ ಮೌಲ್ಯಮಾಪನ ಕುಲಸಚಿವರ ದಿಢೀರ್ ಎತ್ತಂಗಡಿ ….!

ನೂತನ ಕುಲಸಚಿವರ ನೇಮಿಸಿ ಆದೇಶ, ಅಧಿಕಾರ ಸ್ವೀಕರಿಸಿದ ಕುಲಸಚಿವರು

ಧಾರವಾಡ prajakiran.com : ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ರವೀಂದ್ರನಾಥ್ ಕದಂ ಅವರನ್ನು ರಾಜ್ಯದ ಬಿಜೆಪಿ ಸರಕಾರ ದಿಢೀರ್ ಎತ್ತಂಗಡಿ ಮಾಡಿದೆ.

ಅವರ ಸ್ಥಾನಕ್ಕೆ ಮೈಸೂರು ವಿಶ್ವವಿದ್ಯಾಲಯದ ಭೂಗೋಳ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ನಾಗರಾಜ್ ಹೆಚ್. ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.

ಅದರ ಬೆನ್ನಲ್ಲೇ ನೂತನ ಮೌಲ್ಯ ಮಾಪನ ಕುಲಸಚಿವ ನಾಗರಾಜ ಹೆಚ್. ಅಧಿಕಾರ ಸ್ವೀಕರಿಸಿದರು.

ಹಿಂದಿನ ಕುಲಸಚಿವರ ಮೇಲೆ ಸಂಶೋಧನಾ ವಿದ್ಯಾರ್ಥಿಗಳು ಹಲವು ಆರೋಪ ಮಾಡಿ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರು.

ಅದರ ಬೆನ್ನ ಹಿಂದೆಯೇ ಸಂಶೋಧನಾ ವಿದ್ಯಾರ್ಥಿಗಳು ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ.

ಹೀಗಾಗಿ ಅವರ ಸಂಶೋಧನೆ ಕಾರ್ಯ ಸ್ಥಗಿತಗೊಳಿಸಿ, ಅವರು ನನ್ನ ಮೇಲೆ ಅನಗತ್ಯವಾಗಿ ದೂರಿ ಪತ್ರ ಬರೆದಿದ್ದಾರೆ. ಇದು ಸರಿಯಲ್ಲ ಎಂದು ಕುಲಪತಿಗಳಿಗೆ ಪತ್ರ ಬರೆದು ಗಮನ ಸೆಳೆದಿದ್ದರು.

ರಾಜ್ಯ ಸರ್ಕಾರಕ್ಕೆ ಹಲವು ಪತ್ರ ಬಂದ ಹಿನ್ನೆಲೆಯಲ್ಲಿ ಮುಜುಗರ ಉಂಟು ಮಾಡಿತ್ತು. ಅದರೆ, ಅವವಸ್ಥೆ ಸರಿಪಡಿಸಬೇಕಾದ ಸರಕಾರ ಹುದ್ದೆಗೆ ಸರ್ಜರಿ ಮಾಡಿ ಕೈ ತೊಳೆದುಕೊಂಡಿದೆ‌.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *