ಚಿತ್ರದುರ್ಗ prajakiran.com : ಕೋಟೆ ನಾಡು ಚಿತ್ರದುರ್ಗದ ಪಬ್ಲಿಕ್ ಟಿವಿ ಕ್ಯಾಮರಾಮನ್ ಬಸವರಾಜ್ ಕೋಟಿ (44) ಬುಧವಾರ ಕೊರೋನಾಗೆ ಬಲಿಯಾಗಿದ್ದಾರೆ.
ಮೂಲತಃ ಧಾರವಾಡದವರಾದ ಕೋಟಿ ಚಿತ್ರದುರ್ಗಕ್ಕೆ ವೃತ್ತಿ ಅರಸಿ ಹೋಗಿದ್ದರು.
ಪತ್ರಕರ್ತರು, ಕ್ಯಾಮರಾಮನ್ ಕರೋನಾ ಸಂಕಷ್ಟದ ದಿನಗಳಲ್ಲಿ ಎಚ್ಚರವಾಗಿರಬೇಕು.
ಕೇವಲ ಸುದ್ದಿಯ ಬೆನ್ನತ್ತಿ ಕರೋನಾ ಪಾಸಿಟಿವ್ ಆದರೆ ಯಾರು ಹೊಣೆ ಎಂಬ ಪ್ರಶ್ನೆ ಇದೀಗ ಎದುರಾಗಿದೆ.
ರಾಜ್ಯದ ಬಿಜೆಪಿ ಸರ್ಕಾರ ಕೂಡಲೇ ಪತ್ರಕರ್ತ ಬಸವರಾಜ್ ಕೋಟಿ ಅವರ ಪತ್ನಿ ಮತ್ತು ಎರಡು ಪುಟ್ಟ ಮಕ್ಕಳ ಭವಿಷ್ಯಕ್ಕೆ ಸೂಕ್ತ ನೆರವಾಗಬೇಕು ಎಂದು ಜಿಲ್ಲೆಯ ಪತ್ರಕರ್ತರು ಮನವಿ ಮಾಡಿದ್ದಾರೆ.