ರಾಜ್ಯ

ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಕವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ನಾಗರಾಜ್ ಹೆಸರು…..!?

ಕವಿವಿಯಿಂದ ಕೈಬಿಡಲು ಎ.ಬಿ.ವಿ.ಪಿ ಆಗ್ರಹ

ಧಾರವಾಡ prajakiran.com :
ರಾಜ್ಯ ಸರ್ಕಾರ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿಗೆ ನಡೆಸಿದ ಪರೀಕ್ಷೆಯಲ್ಲಿ ಕೇಳಿ ಬಂದಿರುವ ಅಕ್ರಮದ ಹಿನ್ನಲೆಯಲ್ಲಿ ಅಭಾವಿಪ ಸೂಕ್ತ ತನಿಖೆಗೆ ಸರಕಾರಕ್ಕೆ ಆಗ್ರಹಿಸಿತ್ತು.

ಈ ಕುರಿತಾಗಿ ಉನ್ನತ ಶಿಕ್ಷಣ ಸಚಿವರು ಮುಂದಿನ ಕ್ರಮಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಆದೇಶಿಸಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಬಗ್ಗೆ ಸಿಐಡಿ ಗೆ ದೂರು ಕೊಟ್ಟಿತ್ತು.

ದೂರಿನ ಅನ್ವಯ ಸಿಐಡಿಯು ತನಿಖೆಯ ಪ್ರಾರಂಭಿಸಿ, ತನಿಖೆಯ ಪ್ರಾರಂಭದಲ್ಲಿ ಮೈಸೂರಿನ ಸೌಮ್ಯ ಅವರನ್ನು ಬಂಧಿಸಿ ಅವರಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಸಿಐಡಿ ಅಧಿಕಾರಿಗಳು ಕವಿವಿಯ ಪರೀಕ್ಷಾಂಗ ಕುಲಸಚಿವರನ್ನು ವಿಚಾರಣೆಗೆ ಒಳಪಡಿಸಿದ್ದರು.

ಮಾಧ್ಯಮಗಳಲ್ಲಿ
ಕವಿವಿಯ ಪರೀಕ್ಷಾಂಗ ಕುಲಸಚಿವರಾದ ಪ್ರೊ. ನಾಗರಾಜ್ ಅವರನ್ನು ಬಂಧಿಸಿರುವ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದೆ.

ಕವಿವಿಯ ಗೌರವ ಮತ್ತು ಹಿತದೃಷ್ಟಿಯಲ್ಲಿ ಕವಿವಿಯ ಅಧಿಕಾರಿಗಳು ಸತ್ಯಾಸತ್ಯತೆ ಅರಿತುಕೊಂಡು ತಕ್ಷಣವೇ ಕುಲಸಚಿವರನ್ನು ವಜಾಗೊಳಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸುತ್ತದೆ ಎಂದು ಎಬಿವಿಪಿ 
ಜಿಲ್ಲಾ ಸಂಚಾಲಕ ಅರುಣ ಅಮರಗೋಳ, ಪ್ರತಿಕ ಮಾಳಿ, ಗಂಗಾಧರ ಹಂಜಗಿ, ಶಂಶಾಂಕ ಮಟ್ಟಿ,ಬಸವರಾಜ,ದಶ೯ನ ಇತರರು ಮನವಿ ಸಲ್ಲಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *