ಹುಬ್ಬಳ್ಳಿ prajakiran.com : ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಕಿತ್ತಾಟ ನಡೆದಿದೆ.
2019ರಿಂದ ಕಿಮ್ಸ್ ಆಡಳಿತಾಧಿಕಾರಿಯಾಗಿದ್ದ ರಾಜಶ್ರೀ ಜೈನಾಪುರ ಅವರನ್ನು ರಾಜ್ಯ ಸರ್ಕಾರ ಫೆ. 5 ರಂದು ವರ್ಗಾವಣೆ ಮಾಡಿತ್ತು.
ಜೈನಾಪುರ ಅವರಿಂದ ತೆರವಾಗಿದ್ದ ಜಾಗಕ್ಕೆ ವರ್ಗಾವಣೆಯಾಗಿ ಬಂದಿದ್ದ ಇಸ್ಮಾಯಿಲ್ ಸಾಬ್ ಶಿರಹಟ್ಟಿ ಅವರು ವರ್ಗವಾಗಿ ಬಂದಿದ್ದರು.
ಕೃಷ್ಣಾ ಮೇಲ್ದಂಡೆ ಪುನರ್ವಸತಿ ಅಧಿಕಾರಿಯಾಗಿ ಬಾಗಲಕೋಟೆ ಯಲ್ಲಿ ಕೆಲಸ ಮಾಡುತ್ತಿದ್ದ ಶಿರಹಟ್ಟಿ
ಕಳೆದ 3 ದಿನಗಳಿಂದ ಕಿಮ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶಿರಹಟ್ಟಿ ಅವರಿಗೆ ಅಧಿಕಾರ ಹಸ್ತಾಂತರ ಮಾಡದೆ ರಜೆ ಮೇಲೆ ಹೋಗಿರುವ ರಾಜಶ್ರೀ ಜೈನಾಪುರ ನಡೆ ಬೇಸರ ಮೂಡಿಸಿದೆ.
ಕಿಮ್ಸ್ ಆಡಳಿತ ಭವನದಲ್ಲಿ ಇನ್ನು ಜೈನಾಪುರ ಹೆಸರನ್ನೇ ನಾಮಫಲಕ ಹಾಕಿರುವ ಆಡಳಿತ ಮಂಡಳಿ ನಡೆ ಈ ಅನುಮಾನಕ್ಕೆ ಕಾರಣವಾಗಿದೆ.