ಧಾರವಾಡ prajakiran. com : ರಾಜ್ಯದಲ್ಲಿ ಹಿಸಾಬ್-ಕೇಸರಿ ಶಾಲು ಪ್ರಕರಣ ಕುರಿತು ಧಾರವಾಡದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯೆ ನೀಡಿದರು.
ಮಕ್ಕಳ ಮನಸ್ಸು ಭಾಳ ಮೃದು
ಈಗ ನಡೆದಿರೋ ಪ್ರಕರಣ
ಅವರ ಭವಿಷ್ಯಕ್ಕೆ ಅಪಾಯಕಾರಿ
ಇವರೆಲ್ಲ ಅಪಾಯಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ತಂದೆ-ತಾಯಿ ಈ ಬಗ್ಗೆ ವಿಚಾರ ಮಾಡಬೇಕು
ಒಂದು ಕಡೆ ಪಾಕ್ ಜಿಂದಾಬಾದ್, ಅಲ್ಲಾಹೋ ಅಕ್ಬರ್ ಅಂತಾರೆ
ಮತ್ತೊಂದು ಕಡೆಯವರು ಜೈ ಶ್ರೀರಾಮ್ ಅಂತಾರೆ
ಕೋರ್ಟ್ ಏನೇ ತೀರ್ಪು ಕೊಡಲಿ
ಅದನ್ನು ಸರಕಾರವೇ ಜಾರಿ ಮಾಡಬೇಕಲ್ಲವೇ? ಎಂದು ಹೇಳಿದರು.
ಪರಿಸ್ಥಿತಿ ಹೀಗೇ ಮುಂದುವರೆದರೆ ಹೆಣ ಬೀಳೋ ಪರಿಸ್ಥಿತಿ ನಿರ್ಮಾಣವಾಗುತ್ತೆ
ರಾಜಕೀಯ ಬಿಟ್ಟು ಸರಕಾರ ಸಭೆ ಕರೆಯಬೇಕು
ಎಲ್ಲ ಪರಿಣಿತರನ್ನು ಸಭೆಗೆ ಕರೆಯಬೇಕು
ಎಲ್ಲರ ಮನವೊಲಿಸಿ ಸಮಸ್ಯೆ ಬಗೆ ಹರಿಸಬೇಕು ಎಂದು ಸಲಹೆ ನೀಡಿದರು.
ಕೋರ್ಟ್ ಗೆ ಸರಕಾರ ಮಾಹಿತಿ ಕೊಡಬೇಕು
ನಾವೇ ಈ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಅಂತಾ ಹೇಳಬೇಕು
ಒಳ್ಳೆ ವಾತಾವರಣ ನಿರ್ಮಾಣ ಮಾಡಬೇಕು
ತಕ್ಷಣ ಎಲ್ಲ ಕೆಲಸ ನಿಲ್ಲಿಸಬೇಕು
ಏಕೆಂದರೆ ರಾಜ್ಯದಲ್ಲಿ ಗಂಭೀರವಾಗ ಪರಿಸ್ಥಿತಿ ಇದೆ.
ಪ್ರಿಯಾಂಕಾ ಗಾಂಧಿ ಅವರ
ಬಿಕಿನಿ ಧರಿಸಿದರೂ ತಪ್ಪಲ್ಲ ಅನ್ನೋ ಟ್ವೀಟ್ ವಿಚಾರ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ ಅವರು ರಾಜಕೀಯ ಬೇಯಿಸಿಕೊಳ್ಳಲು ಹೇಳಿಕೆ.
ಯಾವ ಮನುಷ್ಯನೇ ಇರಲಿ
ಮಕ್ಕಳಿಗೆ ಎಂಥ ಬಟ್ಟೆ ಧರಿಸಬೇಕು ಅನ್ನೋದನ್ನು ತಂದೆ-ತಾಯಿ ಕಲಿಸಬೇಕು
ತಾಯಿ ಸ್ಥಾನದಲ್ಲಿ ಪ್ರಿಯಾಂಕಾ ಇದ್ದಾರೆ
ಬಿಕಿನಿ ಹಾಕಿಕೊಂಡು ಹೋಗಿ ಎಂದರೆ ತಪ್ಪಾಗುತ್ತದೆ ಎಂದರು.
ಹಕ್ಕು ಎಲ್ಲರಿಗೂ ಇರುತ್ತೆ
ಆದರೆ ಯಾವ್ಯಾವ ಜಾಗದಲ್ಲಿ ಏನು ಧರಿಸಬೇಕು ಅನ್ನೋದು ಮುಖ್ಯ.
ಸಮುದ್ರ ತೀರದಲ್ಲಿ ಬಿಕಿನಿ ಹಾಕಿಕೊಂಡರೆ ಯಾರು ಕೇಳುತ್ತಾರೆ?
ಕಾಲೇಜಿನಲ್ಲಿ ಬಿಕಿನಿ ಹಾಕಿಕೊಂಡು ಹೋಗಿ ಅಂದರೆ ಹೇಗೆ?
ಯಾರನ್ನೋ ಓಲೈಸಲು ಮಾಡೋ ಕೆಲಸವಿದು ಎಂದು ಹೇಳಿದರು.
ನಮಗೆ ರಾಜ್ಯ, ಮಕ್ಕಳು, ನೆಮ್ಮದಿ ಮುಖ್ಯ
ನಾನೀಗ ರಾಜಕೀಯ ಬಗ್ಗೆ ಮಾತಾಡಲು ಬರೋದಿಲ್ಲ.
ಪ್ರಕರಣದಿಂದ ಯಾರಿಗೆ ಲಾಭ ಹೇಳಿ?
ಇದರಿಂದ ಮತ ಬೀಳುತ್ತವೆ ಅನ್ನೋದು ತಪ್ಪು
ಮುಂದೆ ರಾಷ್ಟ್ರವ್ಯಾಪಿ ಗಲಾಟೆ ಶುರುವಾಗುತ್ತೆ
ವಿಧಾನಸಭೆ ಅಧಿವೇಶನಕ್ಕಿಂತ ಮುಂಚೆ ಇದನ್ನು ನಿಲ್ಲಿಸಬೇಕು ಎಂದರು.
ಇದರಿಂದ ಲಾಭ ಏನಿದೆ?
ಇದರಿಂದ ಹೆಣ ಬೀಳುತ್ತವೆ, ಬೆಂಕಿ ಹತ್ತುತ್ತೆ ಅಷ್ಟೇ.ಇದರಿಂದ ಯಾವುದೇ ಪ್ರಯೋಜನವಿಲ್ಲ.
ಇದು ಷಡ್ಯಂತ್ರವಲ್ಲ, ಮೂರ್ಖರು ಮಾಡುತ್ತಿರೋ ಕೆಲಸ
ಪಾಕ್ ಸರಕಾರದಿಂದ ಭಾರತೀಯ ರಾಯಭಾರಿ ಕಚೇರಿಗೆ ಸಮನ್ಸ್ ಹಿನ್ನೆಲೆ
ಪಾಕಿಸ್ತಾನದವರಿಗೆ ಬೇಕಾಗಿದ್ದೇ ಇದು ಎಂದು ಹೊರಟ್ಟಿ ಹೇಳಿದರು.